Advertisement

ಪಕ್ಷಿಗಳ ಸಾವು, ನಾಯಿ ಅಸ್ವಸ್ಥ ವಿಷಾಹಾರ ಸೇವನೆ ಶಂಕೆ

11:04 PM Apr 22, 2019 | sudhir |

ಕೋಟೇಶ್ವರ: ಇಲ್ಲಿನ ಹಿಂದೂ ರುಧ್ರಭೂಮಿಯ ಸನಿಹದ ಪ್ರದೇಶದಲ್ಲಿ ವಿವಿಧ ಪಕ್ಷಿಗಳು ಸಾವನ್ನಪ್ಪಿದ್ದು, ವಿಷಪೂರಿತ ಆಹಾರ ಸೇವಿಸಿ ಅಸುನೀಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

Advertisement

ಘಟನೆಯಲ್ಲಿ 2 ಹದ್ದು, 1 ಕೊಕ್ಕರೆ, 3 ಕಾಗೆಗಳು ಸಾವನ್ನಪ್ಪಿದ್ದು, ಸ್ವಸ್ತಿಕ್‌ ಫರ್ನಿಚರ್‌ ಅವರ ಸಾಕುನಾಯಿ ಅಸ್ವಸ್ಥಗೊಂಡಿದೆ.

ರುಧ್ರಭೂಮಿಯ ಪರಿಸರದಲ್ಲಿ ಜನರು ತ್ಯಾಜ್ಯ ಎಸೆದು ಸಾಗುವ ಪ್ರವೃತ್ತಿ ಕೊನೆಗೊಳ್ಳದೆ ಇರುವ ಕಾರಣ ಇಲ್ಲಿ ಎಸೆಯಲಾದ ವಿಷ ಆಹಾರವನ್ನು ಇವುಗಳು ಸೇವಿಸಿ ಈ ದುರಂತ ಸಂಭವಿಸಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next