Advertisement

ಹಕ್ಕಿಜ್ವರ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ರಕ್ತ ಕ್ಯಾನ್ಸರ್‌ಗೆ ಬಲಿ

06:34 PM Jul 23, 2021 | Team Udayavani |

ಗುರು ಗ್ರಾಮ: ಹಕ್ಕಿಜ್ವರ (ಎಚ್‌5ಎನ್‌1) ಕಾಣಿಸಿಕೊಂಡು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದ ಗುರುಗ್ರಾಮದ 11 ವರ್ಷದ ಬಾಲಕನೊಬ್ಬ ಶುಕ್ರವಾರ ಅಸುನೀಗಿದ್ದಾನೆ. ಆದರೆ, ಆತನ ಸಾವಿಗೆ ರಕ್ತದ ಕ್ಯಾನ್ಸರ್‌ (ಲ್ಯುಕೇಮಿಯಾ) ಕಾರಣ ಎಂದು ವೈದ್ಯರು ಹೇಳಿದ್ದಾರೆ.

Advertisement

ಬಾಲಕ ಸುಶೀಲ್‌ ಕುಮಾರ್‌ಗೆ ಹಕ್ಕಿಜ್ವರ ಇದ್ದುದರಿಂದ, ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಚಕ್ಕರ್‌ಪುರ ಗ್ರಾಮದಲ್ಲಿರುವ ಆತನ ಮನೆಯಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ತೀವ್ರ ನಿಗಾ ವಹಿಸಿದ್ದಾರೆ.

ಗ್ರಾಮದ ಎಲ್ಲ 15,500 ಮಂದಿಯನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಬಾಲಕನ ಕುಟುಂಬಸ್ಥರಿಗೂ 5 ದಿನ ಕ್ವಾರಂಟೈನ್‌ ನಲ್ಲಿರುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ :ನೀಲಿ ಸಿನಿಮಾ ನಿರ್ಮಾಣ ಪ್ರಕರಣ : ನಟಿ ಶಿಲ್ಪಾ ಶೆಟ್ಟಿ ಮನೆಗೆ ಧಾವಿಸಿದ ಪೊಲೀಸ್

Advertisement

Udayavani is now on Telegram. Click here to join our channel and stay updated with the latest news.

Next