Advertisement

ಬಿಲ್ಲವರ ಅಸೋಸಿಯೇಶನ್‌: ವಿಶ್ವ ಮಹಿಳಾ ದಿನಾಚರಣೆಯಲ್ಲಿ ಸಮ್ಮಾನ

01:48 PM Mar 15, 2019 | Team Udayavani |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ವಿಶ್ವಮಹಿಳಾ ದಿನಾಚರಣೆಯು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

Advertisement

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ಅವರ ಅಧ್ಯಕ್ಷತೆ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್‌ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಹಾನಗರದ ಹೆಸರಾಂತ ಮಹಿಳಾ, ಮಕ್ಕಳ ಮತ್ತು ಮನೋವೈದ್ಯೆ ಡಾ| ಅಮೂಲ್ಯ ನಾಗರಾಜ್‌, ಗೌರವ ಅತಿಥಿಗಳಾಗಿ ಕಾಂತಿವರ್ಧಕ ತಜ್ಞೆ    ಡಾ| ಅವನಿ 

ವಶಿಷ್ಠ ಮನಿಯಾರ್‌,  ಸಮಾಜ ಸೇವಕಿ, ಪ್ರಾಣಿಪ್ರಿಯೆ ಸುಮಿತ್ರಾ  ಮೂಡಬಿದ್ರಿ, ಸೆಷನ್ಸ್‌ ಕೋರ್ಟ್‌ನ ನ್ಯಾಯವಾದಿ  ಸೌಮ್ಯಾ ಸಿ. ಪೂಜಾರಿ ಪಾಲ್ಗೊಂಡು  ಕೊಡುಗೈದಾನಿ ಮೋಹಿನಿ ವಿ. ಆರ್‌ ಕೋಟ್ಯಾನ್‌ ಇವರನ್ನು  ಸಮ್ಮಾನಿಸಿದರು. ಅಲ್ಲದೆ  ರಾಷ್ಟ್ರೀಯ ಕ್ರೀಡಾ ರಂಗದ ಮಹಿಳಾ ಸಾಧಕಿ ಸುರೇಖಾ ಎಸ್‌. ದೇವಾಡಿಗ ಇವರಿಗೆ ಸಾಧಕ ಪುರಸ್ಕಾರವನ್ನಿತ್ತು ಅಭಿನಂದಿಸಿದರು.

ಮಹಿಳಾ ವಿಭಾಗದ ಸ್ಥಾಪಕಾಧ್ಯಕ್ಷೆ ವಸಂತಿ ಸಾಲ್ಯಾಣRರ್‌, ಮಹಿಳಾ ವಿಭಾಗದ ಮಾಜಿ ಉಪ ಕಾರ್ಯಾಧ್ಯಕ್ಷೆ ಶ್ರೀಮಂತಿ ಎಸ್‌. ಪೂಜಾರಿ, ದೀಪ್ತಿ ದಿನೇಶ್‌ ಸುವರ್ಣ, ಉಪ ಕಾರ್ಯಾಧ್ಯಕ್ಷೆಯರಾದ ಪ್ರಭಾ ಕೆ. ಬಂಗೇರ, ಗಿರಿಜಾ ಚಂದ್ರಶೇಖರ್‌, ಗೌರವ ಕಾರ್ಯದರ್ಶಿ ಸುಮಿತ್ರಾ ಎಸ್‌. ಬಂಗೇರ, ಜತೆ 

ಕಾರ್ಯದರ್ಶಿಗಳಾದ ಜಯಂತಿ ಎಸ್‌. ಕೋಟ್ಯಾನ್‌ ಮತ್ತು ಕುಸುಮಾ ಸಿ. ಅಮೀನ್‌, ಯಶೋದಾ ಎನ್‌. ಟಿ. ಪೂಜಾರಿ, ವನಿತಾ ಎ. ಕುಕ್ಯಾನ್‌, ಸಬಿತಾ ಜಿ. ಪೂಜಾರಿ, ಬಬಿತಾ ಜೆ. ಕೋಟ್ಯಾನ್‌, ರೂಪಾಂಜಲಿ ಧನಂಜಯ್‌ ಕೋಟ್ಯಾನ್‌, 
ಪೂಜಾ ಪುರುಷೋತ್ತಮ ಕೋಟ್ಯಾನ್‌, ಕಮೋಲಿಕ ಹರೀಶ್‌ ಅಮೀನ್‌,  ಕು| ಚಿತ್ರಾ ಕೋಟ್ಯಾನ್‌ ಉಪಸ್ಥಿತರಿದ್ದರು.     

Advertisement

  ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next