Advertisement

ಬಿಲ್ಲವರ ಅಸೋಸಿಯೇಶನ್‌ ಡೊಂಬಿವಲಿ ಸ್ಥಳೀಯ ಸಮಿತಿ: ಸಾಧಕರಿಗೆ ಸಮ್ಮಾನ

04:27 PM Jul 10, 2018 | |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ  ಸಾಧಕ ಪ್ರತಿಭೆಗಳಾದ ಶ್ರದ್ಧಾ ಬಂಗೇರ ಮತ್ತು ಮನಸ್‌ ಬಂಗೇರ ಅವರಿಗೆ ಸಮ್ಮಾನ ಕಾರ್ಯಕ್ರಮವು ಜು. 5 ರಂದು ಸ್ಥಳೀಯ ಸಮಿತಿಯ ಸಭಾಗೃಹದಲ್ಲಿ ನಡೆಯಿತು.

Advertisement

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಯುವಾಭ್ಯುದಯ ಸಮಿತಿಯ ವತಿಯಿಂದ ಜು. 1 ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ  ಆಯೋಜಿಸಿದ್ದ  ವಾಯ್ಸ… ಆಫ್‌ ಬಿಲ್ಲವ’ ಸಂಗೀತ ಸ್ಪರ್ಧೆಯಲ್ಲಿ ಶ್ರದ್ದಾ ಬಂಗೇರ ಅವರು  16 ರಿಂದ 30 ವರ್ಷದೊಳಗಿನವರ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದರೆ, ಮನಸ್‌ ಬಂಗೇರ ಅವರು 16 ವರ್ಷದೊಳಗಿನವರ ವಿಭಾಗದಲ್ಲಿ  ತೃತೀಯ ಬಹುಮಾನ ಪಡೆದಿದ್ದರು. ಈ ಇಬ್ಬರೂ ಪ್ರತಿಭೆಗಳು ಬಿಲ್ಲವರ ಅಸೋಸಿಯೇಶನ್‌ ಡೊಂಬಿವಲಿ ಸ್ಥಳೀಯ ಸಮಿತಿಯ ಯುವ ವಿಭಾಗದ ಸದಸ್ಯರಾಗಿದ್ದಾರೆ.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಡೊಂಬಿವಲಿ ಸ್ಥಳೀಯ ಸಮಿತಿಯ ಮಾಜಿ ಕಾರ್ಯದಕ್ಷ ರವಿ ಸನಿಲ…, ಉಪ ಕಾರ್ಯಾಧ್ಯಕ್ಷ ಸಿ. ಎನ್‌. ಕರ್ಕೇರ, ಗೌರವ ಕಾರ್ಯದರ್ಶಿ ಪುರಂದರ ಪೂಜಾರಿ, ಗೌರವ ಕೋಶಾಧಿಕಾರಿ  ಲಲಿತ್‌ ಚಂದ್ರ ಸುವರ್ಣ ಅವರು 

ಸಾಧಕರನ್ನು ಶಾಳು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು.  
ಯವ ವಿಭಾಗದ ಸದಸ್ಯರು ಹಾಗೂ ಮಹಿಳಾ ವಿಭಾಗದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next