Advertisement

ಕರುಣಾಶ್ರಯದಲ್ಲಿ ಬೈಕರ್ಸ್ ಹಬ್ಬ

08:09 PM Nov 29, 2019 | Lakshmi GovindaRaj |

ಬೈಕರ್‌ಗಳು ಸದಾ ಸುತ್ತಾಡುವ ಯೋಚನೆಯಲ್ಲೇ ಇರುತ್ತಾರೆ. ಮೋಜು-ಮಸ್ತಿಗೇ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ ಎಂಬ ಭಾವನೆ ಹಲವರಲ್ಲಿ ಇರಬಹುದು. ಆದರೆ, ಊರೂರು ಸುತ್ತುತ್ತಲೇ ನಾವು ಸಮಾಜದ ನೋವಿಗೆ ಮಿಡಿಯುತ್ತೇವೆ ಅನ್ನುತ್ತಿದೆ “ಬ್ರೋಸ್‌ ಆನ್‌ ವೀಲ್ಸ್‌’ ಬೈಕರ್ ತಂಡ. ಬೆಂಗಳೂರಿನ ಸುಜಿತ್‌ ಕುಮಾರ್‌ ನೇತೃತ್ವದ ಈ ತಂಡ, ಕ್ಯಾನ್ಸರ್‌ ರೋಗಿಗಳ ಬದುಕಲ್ಲಿ ಬೆಳಕು ಚೆಲ್ಲಲು ಮುಂದಾಗಿದೆ.

Advertisement

“ನೋ ಶೇವ್‌ ನವೆಂಬರ್‌ ಹೆಸರಿನಲ್ಲಿ ಕ್ಯಾನ್ಸರ್‌ ರೋಗಿಗಳಿಗಾಗಿ ದೇಣಿಗೆ ಸಂಗ್ರಹಿಸಿರುವ ಬೈಕರ್‌ಗಳು, ಈಗ ಕರುಣಾಶ್ರಯ ಕ್ಯಾನ್ಸರ್‌ ಸೆಂಟರ್‌ನಲ್ಲಿ ಅದ್ಧೂರಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ. ಕಾಲೇಜು ಫೆಸ್ಟ್‌ ಮಾದರಿಯ ಈ ಕಾರ್ಯಕ್ರಮದಲ್ಲಿ, ರೋಗಿಗಳ ಮನರಂಜಿಸುವ, ಅವರಲ್ಲಿ ಸ್ಫೂರ್ತಿ ತುಂಬುವ ಅನೇಕ ಚಟುವಟಿಕೆಗಳು ನಡೆಯಲಿವೆ.

ಎಲ್ಲಿ?: ಕರುಣಾಶ್ರಯ ಕ್ಯಾನ್ಸರ್‌ ಕೇರ್‌ ಸೆಂಟರ್‌
ಯಾವಾಗ?: ನ.30, ಶನಿವಾರ ಮಧ್ಯಾಹ್ನ 3.30

Advertisement

Udayavani is now on Telegram. Click here to join our channel and stay updated with the latest news.

Next