Advertisement

ಬೈಕ್‌ ಕಳವು ಆರೋಪಿ ಸೆರೆ

08:03 AM Apr 11, 2018 | Team Udayavani |

ಮೂಲ್ಕಿ: ಬೈಕ್‌ ಕಳವು ಆರೋಪದಲ್ಲಿ ವ್ಯಕ್ತಿಯೋರ್ವನನ್ನು  ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್‌ ಪೆಡ್ಡಿಯಂಗಡಿ ಆದರ್ಶ ನಗರದ ನಿವಾಸಿ ಅಬ್ದುಲ್‌ ಅಮೀರ್‌ (18) ಆರೋಪಿ.

Advertisement

ರಾಷ್ಟ್ರೀಯ ಹೆದ್ದಾರಿಯ ಕೊಲಾ°ಡು ಬಳಿ ಮೂಲ್ಕಿ ಪೊಲೀಸ‌ರು ವಾಹನ ತಪಾಸಣೆ ನಡೆಸುತ್ತಿದ್ದಾಗ ಉಡುಪಿ ಕಡೆಯಿಂದ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬಂದ ಆತ ತನಿಖೆಗೆ ಸೂಕ್ತ ದಾಖಲೆಗಳನ್ನು ಕೇಳಿದಾಗ ಅನುಮಾನಾಸ್ಪದವಾಗಿ ವರ್ತಿಸಿದಾಗ ಆತನ್ನು ವಶಕ್ಕೆ ಪಡೆಯಲಾಯಿತು. 

ತನಿಖೆಗೆ ಒಳಪಡಿಸಿದಾಗ ಆತ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್‌ ಸುರತ್ಕಲ್‌ ಪೆಡ್ಡಿಯಂಗಡಿ ಆದರ್ಶ ನಗರದ ವ್ಯಕ್ತಿಯೊಬ್ಬರ ಮನೆಯಿಂದ ಕಳವು ನಡೆಸಿದ್ದು ಎಂದು ತಿಳಿದು ಬಂತು.

ಮಂಗಳೂರು ನಗರ ಪೊಲೀಸ್‌ ಆಯುಕ್ತ‌ ಟಿ.ಆರ್‌. ಸುರೇಶ್‌ ಅವರ ಮಾರ್ಗದರ್ಶನದಲ್ಲಿ ಉಪ ಆಯುಕ್ತರಾದ ಹನುಮಂತ ರಾಯ ಮತ್ತು ಉಮಾ ಪ್ರಶಾಂತ್‌ ಅವರ ನಿರ್ದೇಶನದಲ್ಲಿ ಪಣಂಬೂರು ಸಹಾಯಕ ಆಯುಕ್ತ ರಾಜೇಂದ್ರ ಅವರ ನೇತೃತ್ವದಲ್ಲಿ ಮೂಲ್ಕಿ ಇನ್ಸ್‌ಪೆಕ್ಟರ್‌ ಶ್ರೀಕಾಂತ್‌, ಎಸ್‌.ಐ. ಶೀತಲ್‌ ಅಲಗೂರು, ಎ.ಎಸ್‌.ಐ. ಚಂದ್ರಶೇಖರ್‌, ಸಿಬಂದಿ ಧರ್ಮೇಂದ್ರ, ಅಣ್ಣಪ್ಪ, ಸುರೇಶ್‌, ಮಹಮ್ಮದ್‌ ಹುಸೇನ್‌, ಬಸವರಾಜ್‌, ಮನೋಜ್‌ ಕುಮಾರ್‌  ಪತ್ತೆ ಕಾರ್ಯದಲ್ಲಿ ಸಹಕರಿಸಿದ್ದರು.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next