Advertisement

ಮೈಸೂರಿನಲ್ಲಿ ಭೀಕರ ಅಪಘಾತ; ಒಂದೇ ಬೈಕ್‌ನಲ್ಲಿದ್ದ ಮೂವರ ದುರ್ಮರಣ 

12:27 PM Dec 02, 2018 | |

ಮೈಸೂರು:ನಂಜನಗೂಡಿನ ಕಲ್ಕುಂದ ಗೇಟ್‌ ಬಳಿ ಭಾನುವಾರ ಬೆಳಗ್ಗೆ ಲಾರಿ ಮತ್ತು ಬೈಕ್‌ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಮೂವರು ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ಸಂಭವಿಸಿದೆ. 

Advertisement

ಟಿ ನರಸೀಪುರ ರಸ್ತೆಯಲ್ಲಿ ಅವಘಡ ಸಂಭವಿಸಿದ್ದು ಅಪಘಾತದ ತೀವ್ರತೆಗೆ ಒಂದೇ ಬೈಕ್‌ನಲ್ಲಿದ್ದ  ಚಂದ್ರ , ಬಸವಸ್ವಾಮಿ ಮತ್ತು ಪ್ರಭು ಎನ್ನುವ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಅಪಘಾತ ತೀವ್ರತೆಗೆ ಲಾರಿಯ ಮುಂಭಾಗವೇ ಜಖಂಗೊಂಡಿದೆ. ಮೂವರ ದೇಹಗಳು ಮತ್ತು ಬೈಕ್‌ ಛಿದ್ರಗೊಂಡಿದೆ. 

ಬಿಳಿಗೆರೆ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next