Advertisement

ಕಾರು ತಗುಲಿದ್ದಕ್ಕೆ ಬಾನೆಟ್‌ಗೆ ಕಾಲಿನಿಂದ ಹೊಡೆದ ಬೈಕ್‌ ಸವಾರ

12:03 PM Jun 10, 2024 | Team Udayavani |

ಬೆಂಗಳೂರು: ಕಾರು ಚಾಲಕ ಯೂಟ ರ್ನ್ ಪಡೆಯುವ ವೇಳೆ ತನ್ನನ್ನು ಗಮನಿ ಸದೆ ಚಾಲನೆ ಮಾಡಿದಕ್ಕೆ ಆಕ್ರೋಶಗೊಂಡ ಬೈಕ್‌ ಸವಾರನೊಬ್ಬ ಕಾರನ್ನು ಅಡ್ಡಗಟ್ಟಿ ಬಾನೆಟ್‌ಗೆ ಕಾಲಿನಿಂದ ಒದ್ದು ಉದ್ಧಟತನ ಪ್ರದರ್ಶಿಸಿದ್ದಾನೆ.

Advertisement

ಈ ದೃಶ್ಯ ಕಾರಿನ ಡ್ಯಾಶ್‌ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್‌ ಆಗಿದೆ. ಜೂ.7ರಂದು 11.30 ರ ಸುಮಾರಿಗೆ ಜಕ್ಕೂರು ಬಳಿಯ ಶ್ರೀರಾಮಪುರ ವಿಲೇಜ್‌ ಬಳಿ ಈ ಘಟನೆ ನಡೆದಿದ್ದು, ಕಾರಿನ ಡ್ಯಾಶ್‌ ಕ್ಯಾಮೆರಾದಲ್ಲಿ ಬೈಕ್‌ ಸವಾರ ಉದ್ಧಟತನ ತೊರಿರುವ ದೃಶ್ಯ ಸೆರೆಯಾಗಿದೆ.

ಕಾರಿನಲ್ಲಿ ಸಾಗುತ್ತಿದ್ದ ಚಾಲಕ ಪ್ರವೀಣ್‌, ಯೂಟರ್ನ್ ಪಡೆಯುವಾಗ ಬೈಕ್‌ ಸವಾರನನ್ನು ಗಮನಿಸದೆ, ಏಕಾಏಕಿ ಯೂಟರ್ನ್ ಮಾಡಿದ್ದಾರೆ. ಅದರಿಂದ ಆಕ್ರೋಶಗೊಂಡ ಬೈಕ್‌ ಸವಾರ ಸ್ವಲ್ಪ ದೂರ ಸಾಗಿದ ಬಳಿಕ ಕಾರನ್ನು ಓವರ್‌ ಟೇಕ್‌ ಮಾಡಿ ಅಡ್ಡಗಟ್ಟಿದ್ದಾನೆ. ನಂತರ ಬೈಕ್‌ನಿಂದ ಇಳಿದು ಬಂದು ಏಕಾಏಕಿ ಕಾರಿನ ಬಾನೆಟ್‌ ಗೆ ಕಾಲಿನಿಂದ ಒದ್ದು, ಕಾರು ಚಾಲಕನಿಗೆ ನಿಂದಿಸಿದ್ದಾನೆ. ಆರೋಪಿಯ ಕೃತ್ಯ ಕಾರಿನಲ್ಲಿ ಅಳವಡಿಸಿದ್ದ ಡ್ಯಾಶ್‌ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ಕುರಿತು ಕಾರು ಚಾಲಕ ಪ್ರವೀಣ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪೊಲೀಸರು ಆತನನ್ನು ಸಂಪರ್ಕಿಸಿ ಬೈಕ್‌ ಚಾಲಕನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next