Advertisement

ಬಸ್ ಚಾಲಕನ ಮೇಲೆ ಹಲ್ಲೆ ಯತ್ನ: ದೂರು ದಾಖಲು

04:04 PM Mar 05, 2021 | Team Udayavani |

ಮಂಗಳೂರು : ಪುತ್ತೂರು ಡಿಪೋದ  ಕೆಎಸ್ ಆರ್ ಟಿಸಿ ಬಸ್ ಚಾಲಕ ರಾಜು ಗಜಕೋಶ ಇಂದು (05-03-2021) ಪುತ್ತೂರಿನಿಂದ ಮಂಗಳೂರು ಕಡೆ ಪ್ರಯಾಣ ಮಾಡುವಾಗ ಅವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಯತ್ನ ನಡೆದಿದೆ.

Advertisement

ರಸ್ತೆಯಲ್ಲಿ ಡಿಯೋ ಸ್ಕೂಟರ್ ಸವಾರ ಅಡ್ಡಾದಿಡ್ಡಿಯಾಗಿ ಗಾಡಿ ಚಲಾಯಿಸಿದ್ದು, ಇದನ್ನು ಪ್ರಶ್ನೆ ಮಾಡಿದ ಬಸ್ ಚಾಲಕನ ಮೇಲೆ ಬೈಕ್ ಸವಾರ ಸೋಹಿಫ್ (19) ಹಲ್ಲೆ ಪ್ರಯತ್ನ ಮಾಡಿರುವ ಘಟನೆ ನಡೆದಿದೆ.

ಸ್ಕೂಟರ್ ನಿಂದ ಇಳಿದು ಬಂದ ಸೋಹಿಫ್ ಬಸ್ ಚಾಲಕ ರಾಜು ಗಜಕೋಶರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ ಕೊಲೆ ಪ್ರಯತ್ನ ನಡೆಸಿದ್ದಾನೆ. ಈ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ಕಲಂ 341, 504, 506, 353, 307ರ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next