Advertisement

ಬೆಳ್ವೆ ಪೆಟ್ರೋಲ್ ಬಂಕ್ ಬಳಿ ಭೀಕರ ಅಪಘಾತ : ಯುವಕ ಸ್ಥಳದಲ್ಲಿಯೇ ಸಾವು

01:52 PM Jun 29, 2021 | Team Udayavani |

ಕುಂದಾಪುರ : ಹೆಂಗವಳ್ಳಿ ಗ್ರಾಮದ ತೊಂಭತ್ತು ಇರಿಗೆ ನಿವಾಸಿ ಮೋಹನ್ ನಾಯ್ಕ್ ಅವರ ಪುತ್ರ ಲಕ್ಷ್ಮಣ ನಾಯ್ಕ್ (30) ಅವರು ಬೆಳಗಿನ ಜಾವಾ 5.30ರ ವೇಳೆ ತನ್ನ ಬೈಕಿನಲ್ಲಿ ಮನೆಯಿಂದ ಆಲ್ಬಾಡಿಯಲಿರುವ ಚಕ್ಕುಲಿ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುವಾಗ ಬೈಂದೂರು ವಿರಾಜಪೇಟೆ ರಾಜ್ಯ ಹೆದ್ದಾರಿಯ ಬೆಳ್ವೆ ಪೆಟ್ರೋಲ್ ಬಂಕ್ ಬಳಿ ಕೋಳಿ ಸಗಣಿ ವಾಹನ ಬೈಕಿಗೆ ಡಿಕ್ಕಿ ಹೊಡೆದಿದೆ.

Advertisement

ಪರಿಣಾಮ ಬೈಕನ್ನು ತುಂಬಾ ದೂರ ಎಳೆದುಕೊಂಡು ಹೋಗಿದೆ. ವಾಹನ ತೆಲೆಯ ಮೇಲೆ ಹತ್ತಿ ಹೋದ ಪರಿಣಾಮ ಯುವಕ ಸ್ಥಳದಲ್ಲಿಯೇ ಸಾವು ಸಂಭವಿಸಿದೆ.

ಕಳಚಿದ ಕುಟುಂಬದ ಆಧಾರ ಕೊಂಡಿ : ಮೋಹನ್ ನಾಯ್ಕ್ ಅವರ 6 ಮಕ್ಕಳಲ್ಲಿ ಲಕ್ಷ್ಮಣ ಅವರು ಮಾತ್ರ ಗಂಡು ಮಗ. ಮೋಹನ್ ನಾಯ್ಕ್ ಅವರು ಅನಾರೋಗ್ಯ ಪೀಡಿತರಾಗಿದ್ದಾರೆ. ಇನ್ನೂ ಇಬ್ಬರು ಹೆಣ್ಣು ಮಕ್ಕಳು ಮದುವೆಗೆ ಬಾಕಿ ಇದ್ದಾರೆ. ಕುಟುಂಬಕ್ಕೆ ಲಕ್ಷ್ಮಣ ಅವರ ಆದಾಯವೇ ಆಧಾರವಾಗಿದೆ. ಅವರು ಮೃತ ಪಟ್ಟಿದ್ದರಿಂದ ಕುಟುಂಬದ ಆಧಾರ ಕೊಂಡಿ ಕಳಚಿದಂತಾಗಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next