Advertisement

ಬೈಕ್‌ಕೆ ರಿಕ್ಷಾ ಢಿಕ್ಕಿ: ಖ್ಯಾತ ಕಬಡ್ಡಿ ಆಟಗಾರ ಸಾವು

06:00 AM Jun 03, 2018 | Team Udayavani |

ಪಡುಬಿದ್ರಿ: ತೆಂಕ ಗ್ರಾಮದ ಅಮೀನ್‌ ಮೂಲ ಸ್ಥಾನದ ಬಳಿ ಪಡುವಣ ಮೀನುಗಾರಿಕಾ ರಸ್ತೆಯಲ್ಲಿ ಜೂ. 1ರಂದು  ಮಧ್ಯರಾತ್ರಿ ರಿಕ್ಷಾವೊಂದು ಬೈಕ್‌ಗೆ  ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್‌ ಸವಾರ, ರಾಜ್ಯ ಮಟ್ಟದ ಕಬಡ್ಡಿ ಆಟಗಾರ, ಎರ್ಮಾಳು ಬಡಾ ಗ್ರಾಮದ ಭಾರತ್‌ ನಗರ ನಿವಾಸಿ ಸುಜಿತ್‌ ಆರ್‌. ಮೆಂಡನ್‌ (21) ಸಾವನ್ನಪ್ಪಿದ್ದಾರೆ. 

Advertisement

ಉಚ್ಚಿಲದಿಂದ ಪಡುಬಿದ್ರಿ ಕಡೆಗೆ ಬರು ತ್ತಿದ್ದ ರಿಕ್ಷಾ ಚಾಲಕನ ಅಜಾಗರೂ ಕ ತೆಯ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಢಿಕ್ಕಿ ಪರಿಣಾಮ ರಸ್ತೆ ಗುರುಳಿದ ಸುಜಿತ್‌  ತಲೆಯು ಪಕ್ಕದಲ್ಲಿದ್ದ ಕಲ್ಲಿಗೆ ಬಡಿದಿದೆ. ಅವರನ್ನು ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ಒಯ್ಯಲಾಯಿತಾದರೂ ಜೀವ ಉಳಿಸಲಾಗಲಿಲ್ಲ.

ಶ್ರೇಷ್ಠ ಅಮೆಚೂರ್‌ ಕಬಡ್ಡಿ ಆಟಗಾರ
ಸುಜಿತ್‌  ಅವರು ಬಡಾ ಗ್ರಾಮದ ರಾಮಾಂಜನೇಯ  ನ್ಪೋರ್ಟ್ಸ್ ಕ್ಲಬ್‌  ಮತ್ತು ಮಹಾಲಕ್ಷ್ಮೀ ತಂಡಗಳ ಸದಸ್ಯನಾಗಿದ್ದು, ಶ್ರೇಷ್ಠ ಅಮೆಚೂರ್‌ ಕಬಡ್ಡಿ ಆಟಗಾರರಾಗಿದ್ದರು.  ಹೊರ ಜಿಲ್ಲೆಗಳ ತಂಡದ ನಾಯಕನಾಗಿಯೂ  ಪ್ರತಿ ನಿಧಿಸಿದ್ದರು. ಕಬಡ್ಡಿಯಲ್ಲಿ ಹೆಸರಾಂತ ಕಾರ್ನರ್‌ ಆಟಗಾರನಾಗಿ ಮಿಂಚಿದ್ದ ಅವರು ಪಿಯುಸಿಯನ್ನು ಎರ್ಮಾಳು, ಅದಮಾರುಗಳಲ್ಲಿ ಮುಗಿಸಿದ್ದರು. ಆ ಸಂದ ರ್ಭ ದಲ್ಲೇ  ಕಬಡ್ಡಿಯಲ್ಲಿ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದರು ಹಾಗೂ ರಾಜ್ಯ ತಂಡವನ್ನೂ ಪ್ರತಿನಿಧಿಸಿ ಪಂಜಾಬ್‌ನಲ್ಲಿ ಆಟವಾಡಿದ್ದರು. ಸಂಜೆ ಕಾಲೇಜು ಶಿಕ್ಷಣವನ್ನೂ, ಬಿಡುವಿನ ವೇಳೆ ಮೀನುಗಾರಿಕಾ ವೃತ್ತಿಯನ್ನೂ  ಮಾಡಿದ್ದ ಶ್ರಮ ಜೀವಿಯಾಗಿದ್ದರು. ಮೀನುಗಾರ ವೃತ್ತಿಯ ರಮೇಶ್‌ ಮೆಂಡನ್‌ ಯಶೋದಾ ದಂಪತಿಯ ಮೂವರು ಪುತ್ರರಲ್ಲಿ ಓರ್ವರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next