Advertisement

ಬಾಲಕಿಯ ಮೇಲೆ ಗ್ಯಾಂಗ್‌ ರೇಪ್‌ ಎಸಗಿ ರೈಲಿನಿಂದ ಎಸೆದ ಕಾಮಾಂಧರು

04:09 PM Jun 19, 2017 | udayavani editorial |

ಪಟ್ನಾ : ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣಕ್ಕೆ ಕಳೆದ ಶುಕ್ರವಾರ ನಸುಕಿನ ವೇಳೆ ಬಹಿರ್ದೆಶೆಗೆಂದು ಕತ್ತಲಲ್ಲಿ  ಮನೆಯಿಂದ ಹೊರಗೆ ಹೋದ ಹತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆರು ಮಂದಿ ಕಾಮಾಂಧರು ಅಪಹರಿಸಿ, ವಂಶೀಪುರ ರೈಲು ನಿಲ್ದಾಣಕ್ಕೆ ಒಯ್ದು ಅಲ್ಲಿಂದ ಆಕೆಯನ್ನು ಲೋಕಲ್‌ ರೈಲಿಗೇರಿಸಿ ಬಳಿಕ ಆಕೆಯ ಮೇಲೆ ಗ್ಯಾಂಗ್‌ ರೇಪ್‌ ಎಸಗಿ, ಬಿಹಾರದ ಕಿಯೂಲ್‌ ಜಂಕ್ಷನ್‌ ಬಳಿ ಆಕೆಯನ್ನು ಎಸೆದ ಅತ್ಯಮಾನುಷ ಘಟನೆ ವರದಿಯಾಗಿದೆ. 

Advertisement

ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರು ಮಂದಿಯ ಪೈಕಿ ಒಬ್ಟಾತನನ್ನು ಈ ತನಕ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳನ್ನು ತ್ವರಿತವಾಗಿ ಬಂಧಿಸುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. 

ಪಟ್ನಾ ಮೆಡಿಕಲ್‌ ಕಾಲೇಜ್‌ ಆ್ಯಂಡ್‌ ಹಾಸ್ಪಿಟಲ್‌ (ಪಿಎಂಸಿಎಚ್‌)ನಲ್ಲಿ  ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯ ಸ್ಥಿತಿ ಗಂಭೀರವಿದೆ; ಆದರೂ ಆಕೆಯಲ್ಲಿ ಚೇತರಿಕೆಯ ಲಕ್ಷಣ ಕಂಡು ಬಂದಿದೆ; ಭಾರೀ ಪ್ರಮಾಣದಲ್ಲಿ ರಕ್ತ ನಷ್ಟಕ್ಕೆ ಗುರಿಯಾಗಿರುವ ಆಕೆಗೆ ಈ ತನಕ ಮೂರು ಯೂನಿಟ್‌ ಬ್ಲಿಡ್‌ ನೀಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.  ಬಾಲಕಿಯು ಬಿಹಾರದ ಲಾಖೀಸರಾಯ್‌ ಜಿಲ್ಲೆಯ ಲಾಖೋಚಾಕ್‌ ಗ್ರಾಮದವಳೆಂದು ಗೊತ್ತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next