Advertisement

ಬಿಹಾರ, ಜಾರ್ಖಂಡ್‌ ಸಿಡಿಲಿಗೆ 23 ಬಲಿ

12:47 AM Jul 25, 2019 | mahesh |

ಹೊಸದಿಲ್ಲಿ: ಬಿಹಾರ, ಜಾರ್ಖಂಡ್‌ನ‌ಲ್ಲಿ ಮಳೆ, ಪ್ರವಾಹ ಸ್ಥಿತಿ ಮುಂದುವರಿದಿದ್ದು, ಬುಧವಾರ ಸಿಡಿಲಿಗೆ 23 ಮಂದಿ ಬಲಿಯಾಗಿದ್ದಾರೆ. ಬಿಹಾರದ 3 ಜಿಲ್ಲೆಗಳಲ್ಲಿ 13 ಮಂದಿ, ಜಾರ್ಖಂಡ್‌ನ‌ 3 ಜಿಲ್ಲೆಗಳಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ಸಾಂನಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದ್ದು, ಮಳೆ ಹಾಗೂ ನೆರೆ ಸಂಬಂಧಿ ಘಟನೆಗಳಿಗೆ ಬಲಿಯಾದವರ ಸಂಖ್ಯೆ 74ಕ್ಕೇರಿಕೆಯಾಗಿದೆ. 38 ಲಕ್ಷ ಮಂದಿ ನಿರ್ವಸಿತರಾಗಿದ್ದಾರೆ.

Advertisement

ಮುಂಬಯಿ; ಭಾರೀ ಮಳೆ: ಈ ಮಧ್ಯೆ, ಕೆಲವು ದಿನಗಳ ವಿರಾಮದ ಬಳಿಕ ಬುಧವಾರದಿಂದ ಮತ್ತೆ ಮುಂಬಯಿಯಲ್ಲಿ ವರುಣನ ಅಬ್ಬರ ಆರಂಭವಾಗಿದೆ. ಭಾರೀ ಮಳೆಯಿಂದಾಗಿ ಸಂಚಾರ, ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ತಲೆದೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next