Advertisement

Bihar ಸೇತುವೆ ಕುಸಿತ: 14 ಎಂಜಿನಿಯರ್‌ಗಳ ಸಸ್ಪೆಂಡ್‌

01:02 AM Jul 06, 2024 | Team Udayavani |

ಪಟ್ನಾ: ಬಿಹಾರದಲ್ಲಿ ಸಾಲು ಸಾಲು ಸೇತುವೆಗಳು ಕುಸಿತ ಗೊಂಡ ಹಿನ್ನೆಲೆ ರಾಜ್ಯ ಸರಕಾರ‌ 14 ಎಂಜಿನಿಯರ್‌ಗಳನ್ನು ಅಮಾನತ್ತುಗೊಳಿಸಿದೆ. ಸೇತುವೆಗಳ ನಿರ್ವಹಣೆಯಲ್ಲಿ ಎಂಜಿನಿಯರ್‌ಗಳು ನಿರ್ಲಕ್ಷ್ಯ ವಹಿಸುರುವುದೇ ಸೇತುವೆಗಳ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಅಮಾನತು ಗೊಂಡವರಲ್ಲಿ 3 ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿದ್ದಾರೆ ಎಂದು ಜಲ ಸಂಪನ್ಮೂಲ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಚೈತನ್ಯ ಪ್ರಸಾದ್‌ ತಿಳಿಸಿದ್ದಾರೆ. ಕಳೆದ 17 ದಿನಗಳಲ್ಲಿ ಬಿಹಾರದ ಸಾರನ್‌, ಮಧುಬಾನಿ, ಸಿವಾನ್‌, ಪೂರ್ವ ಚಂಪಾರನ್‌, ಕಿಶನ್‌ಗಂಜ್‌, ಅರಾರಿಯಾ ಜಿಲ್ಲೆಗಳ 12 ಸೇತುವೆಗಳು ಕುಸಿತಗೊಂಡಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next