Advertisement

ಭೀಕರ ದುರಂತ: ಲಾರಿ ಹರಿದು ಮೂವರ ಸಾವು, ಐವರಿಗೆ ಗಂಭೀರ ಗಾಯ

11:18 AM Oct 11, 2019 | Mithun PG |

ಬೆಳಗಾವಿ: ದುರ್ಗಾಮಾತಾ ಜನರ ಗುಂಪಿನ ಮೇಲೆ ಲಾರಿಯೊಂದು ಹರಿದು ಮೂವರು ಸಾವನ್ನಪ್ಪಿ , ಐದಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡ ಭೀಕರ ಘಟನೆ ಕಾಗೆವಾಡಿ ಬಳಿಯ ಗಣೇಶವಾಡಿ ಎಂಬಲ್ಲಿ ನಡೆದಿದೆ.

Advertisement

ಮೃತರಿಬ್ಬರನ್ನು ಸಂಜಯ ಪಾಟೀಲ್ (40), ಸಚಿನ್ ಕರೆಗೌಡ ಪಾಟೀಲ್ (35) ಎಂದು ಗುರುತಿಸಲಾಗಿದ್ದು, ಮತ್ತೋರ್ವನ ಗುರುತು ಪತ್ತೆಯಾಗಲಿಲ್ಲ. ಗಾಯಾಳುಗಳಿಗೆ ಮೀರಜ್ ಆಸ್ಪತ್ತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ ಚಾಲಕನನ್ನು ಕಾಗೆವಾಡ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಬೆಳಗಾವಿ ಜೆಲ್ಲೆ ಕಾಗೆವಾಡ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next