Advertisement

BB Telugu: ಬಿಗ್‌ಬಾಸ್‌ ಗೆದ್ದು ಮೂರೇ ದಿನದಲ್ಲಿ ಜೈಲು ಸೇರಿದ ಪಲ್ಲವಿ ಪ್ರಶಾಂತ್‌.!

02:50 PM Dec 23, 2023 | Team Udayavani |

ಹೈದರಾಬಾದ್: ಬಿಗ್‌ ಬಾಸ್ ತೆಲುಗು ಸೀಸನ್‌ -7 ಪಲ್ಲವಿ ಪ್ರಶಾಂತ್‌ ಅವರು ಬಿಗ್‌ ಬಾಸ್‌ ಪ್ರಶಸ್ತಿ ಗೆದ್ದ ಬಳಿಕ ಸುದ್ದಿಯಲ್ಲಿದ್ದಾರೆ. ಅವರ ವಿರುದ್ಧ ಪೊಲೀಸರು ಜಾಮೀನು ರಹಿತ ಕ್ರಿಮಿನಲ್‌ ಕೇಸ್‌ ದಾಖಲಿಸಿದ ಬಳಿಕ ಅವರು ಪೊಲೀಸರ ಕಣ್ತಪ್ಪಿಸಿ ಪರಾರಿ ಆಗಿದ್ದಾರೆ ಎನ್ನಲಾಗಿತ್ತು, ಇದೀಗ ಪೊಲೀಸರು ಅವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ವರದಿಯಾಗಿದೆ.

Advertisement

ಆಗಿದ್ದೇನು? : ಭಾನುವಾರ(ಡಿ.17 ರಂದು) ಬಿಗ್‌ ಬಾಸ್‌ ಫಿನಾಲೆ ನಡೆದಿತ್ತು. ಬಿಗ್ ಬಾಸ್ ನ ಗ್ರ್ಯಾಂಡ್ ಫಿನಾಲೆಗೆ ತಮ್ಮ ಹಳ್ಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಕರೆತರದಂತೆ ಪ್ರಶಾಂತ್ ಅವರಲ್ಲಿ ಪೊಲೀಸರು ಮೊದಲೇ ವಿನಂತಿಸಿದ್ದರು. ಇದಲ್ಲದೇ ಜನಸಂದಣಿ ತಪ್ಪಿಸಲು  ಅನ್ನಪೂರ್ಣ ಸ್ಟುಡಿಯೋದಲ್ಲಿರುವ ಬೇರೆ ನಿರ್ಗಮನ ದ್ವಾರವನ್ನು ಬಳಸಬೇಕೆಂದು ಪೊಲೀಸರು ವಿನಂತಿಸಿದ್ದರು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಪ್ರಶಾಂತ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟು ಮಾಡಿದ್ದರಿಂದ ರಸ್ತೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರ ಅನುಮತಿಯಿಲ್ಲದೆ ಅವರು ರ‍್ಯಾಲಿ ನಡೆಸಿದ್ದರು.

ಬಿಗ್‌ ಬಾಸ್‌ ವಿಜೇತ ಪ್ರಶಾಂತ್‌ ಹಾಗೂ ರನ್ನರ್‌ ಅಪ್‌ ಅಮರ್‌ ಅಭಿಮಾನಿಗಳ ನಡುವೆ ರಂಪಾಟವೇ ನಡೆದಿತ್ತು. ಉತ್ಸುಕರಾದ ಅಭಿಮಾನಿಗಳು ವಿವಿಧ ಹೌಸ್‌ಮೇಟ್‌ಗಳ ಕಾರಿನ ಗ್ಲಾಸ್‌ಗಳನ್ನು ಒಡೆದು, ಹಲವು ಸರ್ಕಾರಿ ಬಸ್‌ಗಳ ಗಾಜುಗಳನ್ನು ಒಡೆದಿದ್ದಾರೆ. ಅಮರ್ ಮತ್ತು ಪ್ರಶಾಂತ್ ಅಭಿಮಾನಿಗಳ ನಡುವೆ ರಸ್ತೆಯಲ್ಲೇ ಹೊಡೆದಾಟ ನಡೆದಿತ್ತು.

ಇದನ್ನೆಲ್ಲಾ ಪರಿಗಣಿಸಿ ಪೊಲೀಸರು ಪ್ರಶಾಂತ್ ವಿರುದ್ಧ ಅಸಹಕಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ. ಇಂದು ಸಂಜೆಯೊಳಗೆ (ಡಿ.20) ತಮ್ಮ ಮುಂದೆ ಹಾಜರಾಗುವಂತೆ ಪೊಲೀಸರು ಪ್ರಶಾಂತ್‌ಗೆ ಸೂಚಿಸಿದ್ದರು.

ಆದರೆ ಪೊಲೀಸರ ಕೈಗೆ ಸಿಗದೆ ಪಲ್ಲವಿ ಪ್ರಶಾಂತ್‌ ಪರಾರಿ ಆಗಿದ್ದರು ಎನ್ನಲಾಗಿತ್ತು. ಗದ್ವೇಲ್‌ನಲ್ಲಿರುವ ಅವರ ನಿವಾಸದಿಂದ ಅವರನ್ನು ಬಂಧಿಸಲಾಗಿದೆ. ಪ್ರಶಾಂತ್ ಅವರನ್ನು ನಿನ್ನೆ ರಾತ್ರಿ ಹೈದರಾಬಾದ್‌ಗೆ ಕರೆದೊಯ್ಯಲಾಯಿತು ಮತ್ತು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಪ್ರಶಾಂತ್‌ , ಅವರ ಸಹೋದರನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿ ತಿಳಿಸಿದೆ. ಸದ್ಯ ಪ್ರಶಾಂತ್‌ ಹೈದರಾಬಾದ್‌ನ ಚಂಚಲಗುಡ ಜೈಲಿನಲ್ಲಿದ್ದಾರೆ.

View this post on Instagram
Advertisement

 

A post shared by IDream Media (@idreammedia)

 

Advertisement

Udayavani is now on Telegram. Click here to join our channel and stay updated with the latest news.

Next