Advertisement

ಆದಿತ್ಯ ಠಾಕ್ರೆ ಸಮ್ಮತಿಸಿದ ಯೋಜನೆಗಳ ಬಗ್ಗೆ ತನಿಖೆ

06:30 PM Jul 25, 2022 | Team Udayavani |

ಮುಂಬೈ: ಎಂವಿಎ ಸರ್ಕಾರದ ಅವಧಿಯಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಆದಿತ್ಯ ಠಾಕ್ರೆ ಮಂಜೂರು ಮಾಡಿದ ಎಲ್ಲಾ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಲು ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರ ಆದೇಶ ನೀಡಿದೆ.

Advertisement

ಇದರಿಂದಾಗಿ ಮಾಜಿ ಸಿಎಂ ಉದ್ಧವ್‌ ಠಾಕ್ರೆ ಪುತ್ರಗೆ ಭಾರಿ ಮುಜುಗರ ಉಂಟಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆದಿತ್ಯ ಠಾಕ್ರೆ ಪ್ರತಿನಿಧಿಸುವ ವರ್ಲಿ ವಿಧಾನಸಭಾ ಕ್ಷೇತ್ರಕ್ಕೆ ಅಗತ್ಯಕ್ಕಿಂತ ಹೆಚ್ಚಿನ ರೀತಿಯಲ್ಲಿ ವಿತ್ತೀಯ ನೆರವು ನೀಡಲಾಗಿರುವ ಬಗ್ಗೆ ತನಿಖೆ ನಡೆಸಲೂ ತೀರ್ಮಾನಿಸಲಾಗಿದೆ.

ಸೆವಾರಿ-ವರ್ಲಿ ಎತ್ತರಿಸಿದ ರಸ್ತೆ ಕಾಮಗಾರಿ ಸೇರಿದಂತೆ 1,276 ಕೋಟಿ ರೂ.ಗಳಿಗಿಂತಲೂ ಅಧಿಕ ಮೊತ್ತದ ಕಾಮಗಾರಿಗಳನ್ನು ಅವರು ಮಂಜೂರು ಮಾಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next