Advertisement

ಜನಸೇನಾ ಪಕ್ಷ ಬಿಟ್ಟ ನಿವೃತ್ತ ಐಪಿಎಸ್‌ ಅಧಿಕಾರಿ

09:34 AM Feb 01, 2020 | Hari Prasad |

ಹೈದರಾಬಾದ್‌: ಟಾಲಿವುಡ್‌ ನಟ ಪವನ್‌ ಕಲ್ಯಾಣ್‌ ನೇತೃತ್ವದ ಜನಸೇನಾ ಪಕ್ಷಕ್ಕೆ ನಿವೃತ್ತ ಐಪಿಎಸ್‌ ಅಧಿಕಾರಿ, ಬಳ್ಳಾರಿ ಮೂಲದ ವಿ.ವಿ.ಲಕ್ಷ್ಮೀನಾರಾಯಣ ಗುರುವಾರ ರಾಜೀ ನಾಮೆ ನೀಡಿದ್ದಾರೆ. ಈ ಬಗ್ಗೆ ಅವರು ಪಕ್ಷದ ಸಂಸ್ಥಾಪಕ ಪವನ್‌ ಕಲ್ಯಾಣ್‌ಗೆ ಮುಕ್ತ ಪತ್ರ ಬರೆದಿದ್ದಾರೆ.

Advertisement

ಜೀವನವನ್ನೇ ರಾಜಕೀಯಕ್ಕೆ ಮುಡುಪಾಗಿ ಇರಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದ ಪವನ್‌ ಕಲ್ಯಾಣ್‌ ಮತ್ತೆ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವುದಕ್ಕೆ ಆಕ್ಷೇಪ ಮಾಡಿದ್ದಾರೆ. ಪಕ್ಷ ತ್ಯಜಿಸುವುದಕ್ಕೆ ಇದುವೇ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ. ಮತ್ತೆ ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಜಕೀಯದಲ್ಲಿ ಮುಂದುವರಿಯುವ ನಿಮ್ಮ ಇಚ್ಛಾ ಶಕ್ತಿ ದೃಢವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಟೀಕಿಸಿದ್ದಾರೆ.

ಲಕ್ಷ್ಮೀನಾರಾಯಣ ಅವರು ಈ ಹಿಂದೆ ಬಳ್ಳಾರಿ ರೆಡ್ಡಿ ಸಹೋದರರ ಓಬಳಾಪುರಂ ಗಣಿ ಅಕ್ರಮ ಪ್ರಕರಣ, ಸತ್ಯಂ ಕಂಪ್ಯೂಟರ್ಸ್‌ ಹಗರಣ, ಆಂಧ್ರದ ಹಾಲಿ ಸಿಎಂ ಜಗನ್‌ ರೆಡ್ಡಿ ಅವರ ಅಕ್ರಮ ಆಸ್ತಿ ಪ್ರಕರಣದ ತನಿಖೆಯನ್ನು ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next