Advertisement

ಕೇಂದ್ರ ಸಂಪುಟ ಪುನರ್ ರಚನೆ : ಶೋಭಾ ಕರಂದ್ಲಾಜೆಗೆ ಅವಕಾಶ, ಸದಾನಂದ ಗೌಡ ಔಟ್

02:01 PM Jul 07, 2021 | Team Udayavani |

ನವದೆಹಲಿ : ಎಲ್ಲರ ಗಮನ ಸೆಳೆದಿರುವ, ಬಹು ನಿರೀಕ್ಷಿತ ಕೇಂದ್ರ ಸಚಿವ ಸಂಪುಟದ ಪುನರ್‌ ರಚನೆ ಇಂದು(ಬುಧವಾರ) ಸಂಜೆ 6ಕ್ಕೆ ನಡೆಯಲಿದ್ದು, ಸಂಪುಟಕ್ಕೆ ಹೊಸದಾಗಿ ಸೇರುವ ನಿರೀಕ್ಷೆಯಲ್ಲಿರುವ ನಾಯಕರು ಮೋದಿ ಭೇಟಿಯಾಗಲು ಕಾಯುತ್ತಿದ್ದಾರೆ. ಇದರ ನಡುವೆ ಕೇಂದ್ರ ಸಚಿವ ಸದಾನಂದ ಗೌಡ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.

Advertisement

ಜ್ಯೋತಿರಾದಿತ್ಯ ಸಿಂಧಿಯಾ, ನಾರಾಯಣ ರಾಣೆ ಸೇರಿದಂತೆ ಸಂಪುಟ ಸೇರುವ 24 ಮಂದಿ ಇಂದು ಮುಂಜಾನೆಯಿಂದಲೇ ಪ್ರಧಾನಿ ಭೇಟಿಗೆ ಕಾದು ಕುಳಿತಿದ್ದು, ಸಂಜೆ ಸಂಪುಟ ಪುನರ್ ರಚನೆ ಕಾರ್ಯ ನಡೆಯಲಿದೆ.  ಇನ್ನು ಚಿಕ್ಕಮಕಗಳೂರು ಮತ್ತು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದ್ದು, ಕರಂದ್ಲಾಜೆ ಕೂಡ ಮೋದಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಇನ್ನು ಹಣಕಾಸು ಖಾತೆ ರಾಜ್ಯ ಸಚಿವರಾಗಿರುವ ಅನುರಾಗ್‌ ಠಾಕೂರ್‌ ಜೊತೆ ಮೂವರಿಗೆ ಸಂಪುಟದಲ್ಲಿ ಬಡ್ತಿ ನೀಡಲಾಗುತ್ತದೆ. ಹಾಗೂ ಮೀನಾಕ್ಷಿ ಲೇಖಿ, ಅನುಪ್ರಿಯಾ ಪಟೇಲ್‌ , ಶೋಭಾ ಕರಂದ್ಲಾಜೆ, ಸೇರಿದಂತೆ ಐವರು ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ಸಿಗುತ್ತದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸಂಪುಟದಿಂದ ಅವರನ್ನು ಕೈಬಿಡಲಾಗಿದೆ.

ಈಗಾಗಲೇ, ಕೇಂದ್ರ ಸಚಿವ ಸಂತೋಷ್‌ ಗಂಗ್ವಾರ್‌ ರಾಜೀನಾಮೆ ನೀಡಿದ್ದು, ಇನ್ನೂಮೂರ್ನಾಲ್ಕು ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಸಆಧ್ಯತೆ ಇದೆ. ರಾಜೀನಾಮೆ ನೀಡುವ ಸಾಧ್ಯತೆ ಇದೆ

Advertisement

Udayavani is now on Telegram. Click here to join our channel and stay updated with the latest news.

Next