Advertisement

ನಗರಸಭೆಯಿಂದ ಜನಜಾಗೃತಿ

05:25 PM Mar 25, 2020 | Naveen |

ಬೀದರ:
ಕೊರೊನಾ ವೈರಸ್‌ ಹರಡದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಂಗಳವಾರ ಬಸವಕಲ್ಯಾಣ ಪಟ್ಟಣದಲ್ಲಿ ನಗರಸಭೆಯಿಂದ ಜನಜಾಗೃತಿ ನಡೆಯಿತು.

Advertisement

ಖುದ್ದು ಪೌರಾಯುಕ್ತರೇ ಸ್ಕೂಟಿ ಏರಿ ಜೊತೆಗೆ ನಗರಸಭೆಯ ಇನ್ನಿತರ ಅಧಿಕಾರಿಗಳು ಮತ್ತು ಸಿಬ್ಬಂದಿ ಪೌರಾಯುಕ್ತರೊಂದಿಗೆ ಬಸವಕಲ್ಯಾಣ ಬೀದಿಬೀದಿಗಳಲ್ಲಿ ಸಂಚರಿಸಿ, ರಸ್ತೆ ಬದಿ ಅಲ್ಲಲ್ಲಿ ನಿಂತಿದ್ದ ಜನರಿಗೆ ಮನೆಯಲ್ಲಿ ಇರುವಂತೆ ತಿಳಿಸಿದರು. ಜನರು ಗುಂಪಾಗಿ ಸೇರಬಾರದು ಎಂದು ತಿಳಿವಳಿಕೆ ಮೂಡಿಸಿದರು.

“ನಾವು ಬಸವಕಲ್ಯಾಣ ನಗರಸಭೆಯ ಸ್ವಚ್ಛತೆಯ ಯೋಧರು. ನಾವು ಇಂದಿನಿಂದ ಸ್ವಚ್ಛತೆಯ ಜೊತೆಗೆ ಜನಸಂದಣಿ ತಡೆಯಲು ಪ್ರಮಾಣ ಮಾಡಿ ಕ್ಷೇತ್ರಕಾರ್ಯಕ್ಕೆ ನುಗ್ಗಿದ್ದೇವೆ. ದಯಮಾಡಿ ಎಲ್ಲರೂ ಸಹಕರಿಸಿ ಮನೆಯಲ್ಲಿಯೇ ಇರಿ’ ಎಂದು ಘೋಷಣೆ ಹಾಕುತ್ತ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಪೌರಾಯುಕ್ತರಾದ ಮೀನಾಕುಮಾರಿ ಬೋರಾಳಕರ್‌, ಪರಿಸರ ಅಭಿಯಂತರ ಮನೋಜಕುಮಾರ, ಆರೋಗ್ಯ ನಿರೀಕ್ಷಕರಾದ ಅಶ್ವಿ‌ನಕುಮಾರ, ಗಂಗಾಧರ, ನಿತ್ಯಾನಂದ ಮತ್ತು ಪೌರ ಕಾರ್ಮಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next