Advertisement

ಬೀದರ: ಮತ್ತೆ ಕೋವಿಡ್ ಆರ್ಭಟ

08:59 AM Jul 03, 2020 | Suhan S |

ಬೀದರ: ಗಡಿ ಜಿಲ್ಲೆ ಬೀದರನಲ್ಲಿ ರಕ್ಕಸ ಕೋವಿಡ್ ಆರ್ಭಟಿಸಿದ್ದು, ಗುರುವಾರ ಯೋಧ ಮತ್ತು ಮೂರು ಜನ ಕೆಎಸ್‌ಆರ್‌ಪಿ ಪೇದೆಗಳು ಸೇರಿ 32 ಪಾಸಿಟಿವ್‌ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 647ಕ್ಕೆ ತಲುಪಿದೆ.

Advertisement

ಗ್ರಾಮೀಣ ಭಾಗದಲ್ಲಿ ಕೋವಿಡ್‌- 19 ಕರಾಳ ಛಾಯೆ ಆವರಿಸುತ್ತಿರುವುದು ಭೀತಿಯನ್ನು ಹೆಚ್ಚಿಸುತ್ತಿದೆ. ಔರಾದ ತಾಲೂಕಿನಲ್ಲಿ ಅತಿ ಹೆಚ್ಚು 15 ಪ್ರಕರಣಗಳು ಪತ್ತೆಯಾಗಿದ್ದರೆ, ಬೀದರ 8, ಬಸವಕಲ್ಯಾಣ ಮತ್ತು ಭಾಲ್ಕಿ ತಲಾ 4 ಮತ್ತು ಕಮಲನಗರ ತಾಲೂಕಿನಲ್ಲಿ 1 ಸೇರಿ ಒಟ್ಟು 32 ಕೇಸ್‌ ಗಳು ವರದಿಯಾಗಿವೆ. ದೆಹಲಿಯಿಂದ ಸ್ವಗ್ರಾಮ ಬಸವಕಲ್ಯಾಣ ತಾಲೂಕಿನ ಕಲಖೋರಾ ಗ್ರಾಮಕ್ಕೆ ಬಂದಿರುವ ಸಿಆರ್‌ಪಿಎಫ್‌ ಯೋಧ, ನೌಬಾದ್‌ ಕೆಎಸ್‌ಆರ್‌ಪಿಯ ಮೂವರು ಪೇದೆಗಳಿಗೆ ಸೋಂಕು ವಕ್ಕರಿಸಿದೆ.

ಗುರುವಾರ ಪತ್ತೆಯಾಗಿರುವ ಹೊಸ ಪಾಸಿಟಿವ್‌ ಕೇಸ್‌ಗಳಲ್ಲಿ ಔರಾದ ಪಟ್ಟಣ 4, ತಾಲೂಕಿನ ಹಾಲಹಳ್ಳಿ 9, ರಾಯಪಳ್ಳಿ ಮತ್ತು ನಾರಾಯಣಪುರ ಗ್ರಾಮದ ತಲಾ 1 ಕೇಸ್‌ ಸೇರಿ ಒಟ್ಟು 15, ಬೀದರ ನಗರದ 2, ತಾಲೂಕಿನ ಅಮಲಾಪುರ 5, ಇಸ್ಲಾಂಪುರ 1 ಸೇರಿ ಒಟ್ಟು 8, ಬಸವಕಲ್ಯಾಣ ನಗರ, ತಾಲೂಕಿನ ಚಿಕ್ಕನಾಗಾಂವ್‌, ಕಲಖೇರಾ ಮತ್ತು ಧನ್ನೂರ(ಕೆ) ಗ್ರಾಮದ ತಲಾ 1 ಪ್ರಕರಣ ಸೇರಿ ಒಟ್ಟು 4, ಭಾಲ್ಕಿ ತಾಲೂಕಿನ ಚಿಕ್ಕಲಚಂದಾ, ಮದಕಟ್ಟಿ ಮತ್ತು ಕಾಕನಾಳ ಗ್ರಾಮದ ತಲಾ 1 ಹಾಗೂ ಕಮಲನಗರ ಪಟ್ಟಣದಲ್ಲಿ 1 ಪ್ರಕರಣ ವರದಿಯಾಗಿವೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 647 ಆದಂತಾಗಿದೆ. ಅದರಲ್ಲಿ 21 ಜನ ಸಾವನ್ನಪ್ಪಿದ್ದರೆ 500 ಜನ ಗುಣಮುಖರಾಗಿದ್ದು, 126 ಸಕ್ರಿಯ ಪ್ರಕರಣಗಳಿವೆ.

1906 ಜನರ ವರದಿ ಬಾಕಿ: ಜಿಲ್ಲೆಯಲ್ಲಿ ಕೋವಿಡ್ ಶಂಕಿತ 1906 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ಬರಬೇಕಿದೆ. ಈವರೆಗೆ 38,989 ಜನರ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 36,436 ಮಂದಿಯದ್ದು ನೆಗೆಟಿವ್‌ ಬಂದಿದೆ ಎಂದು ಹೆಲ್ತ್‌ ಬುಲೆಟಿನ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next