Advertisement

ಕೊರೊನಾ ನಿಯಂತ್ರಣ ಜನಜಾಗೃತಿ

04:04 PM Mar 08, 2020 | Naveen |

ಬೀದರ: ಕೊರೊನಾ ವೈರಸ್‌ ತಡೆ ಹಿನ್ನೆಲೆಯಲ್ಲಿ ಮತ್ತು ಜನಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಹಾಗೂ ಗ್ರಾಮ ಪಂಚಾಯತ್‌ ಆಶ್ರಯದಲ್ಲಿ ತಾಲೂಕಿನ ಅಷ್ಟೂರ್‌ ಗ್ರಾಮದಲ್ಲಿ ಶನಿವಾರ ಜನಜಾಗೃತಿ ಕಾರ್ಯಕ್ರಮ ನಡೆಯಿತು.

Advertisement

ಜಿಪಂ ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿ ಜ್ಞಾನೇಂದ್ರಕುಮಾರ ಗಂಗವಾರ ಅವರು ಬೆಳಗ್ಗೆ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಅಷ್ಟೂರ ಗ್ರಾಮಕ್ಕೆ ತೆರಳಿದರು. ಗ್ರಾಪಂ ಅಧ್ಯಕ್ಷರು ಮತ್ತು ಸಿಬ್ಬಂದಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸೇರಿ ಅಷ್ಟೂರ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಸ್ವತ್ಛತಾ ಕಾರ್ಯ ಕೈಗೊಂಡರು.

ಸಿಇಒ ಗಂಗವಾರ ಅವರು ಶಾಲಾ ಆವರಣದ ಸುತ್ತ ಬಿದ್ದಿದ್ದ ಕಸವನ್ನು ಎತ್ತಿ ಶುಚಿಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಸ್ಥಳೀಯ ಸಂಸ್ಥೆ ಅಧ್ಯಕ್ಷರು, ಸದಸ್ಯರು ಸಾಥ್‌
ನೀಡಿದರು.

ಮಹಿಳಾ ಗ್ರಾಮ ಸಭೆ: ಜನಜಾಗೃತಿ ಜನಾಂದೋಲನ ಕಾರ್ಯಕ್ರಮದ ಬಳಿಕ ಸಸಿಗೆ ನಿರೆರೆಯುವ ಮೂಲಕ ಮಹಿಳಾ ಗ್ರಾಮ ಸಭೆಯನ್ನು ಸಿಇಒ ಅವರು ಉದ್ಘಾಟಿಸಿ ಮಾತನಾಡಿ, ಮಹಿಳೆಯರು ತಮ್ಮ ಮನೆ ಮತ್ತು ಸುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಂಡು, ಯಾವುದೇ ರೀತಿಯ ಖಾಯಿಲೆಗಳು ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ತಾಪಂ ಸಹಾಯಕ ನಿರ್ದೇಶಕ ಶರತಕುಮಾರ ಮಾತನಾಡಿದರು. ತಾಪಂ ಇಒ ಧನರಾಜ ಬೋರಾಳೆ, ಜಿಪಂ ಸಹಾಯಕ ಕಾರ್ಯದರ್ಶಿ ಬೀರೇಂದ್ರ ಸಿಂಗ್‌, ನರೇಗಾ ಅಧಿಕಾರಿ ದೀಪಕ ಕುಮಾರ, ಗ್ರಾಪಂ ಅಧ್ಯಕ್ಷ ಮಹಾದೇವ ಪಾಟೀಲ, ಪಿಡಿಒ ವೀರಪ್ಪಾ ಕನ್ನಾ ಸೇರಿದಂತೆ ಮತ್ತಿತರರು ಇದ್ದರು. ಗ್ರಾಪಂ ಸದಸ್ಯ ಸುನೀಲ ಕುಮಾರ ಚಾದ್ದೆ ಸ್ವಾಗತಿಸಿದರು. ಸಂದಶೆಟ್ಟಿ ರಾಮತೀರ್ಥ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next