Advertisement

ಬೀದರ್: ಯುವ ರೈತರಿಬ್ಬರನ್ನು ಬಲಿ ಪಡೆದ ಸಿಡಿಲಿನ ಆಘಾತ

06:37 PM Oct 21, 2022 | Team Udayavani |

ಕಮಲನಗರ : ಸಿಡಿಲು ಬಡಿದು ಇಬ್ಬರು ರೈತರು ಸಾವನ್ನಪ್ಪಿರುವ ದಾರುಣ ಘಟನೆ ಶುಕ್ರವಾರ ಕಮಲನಗರ ತಾಲೂಕಿನ ಮುಧೋಳ(ಕೆ) ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

Advertisement

ಚಿಮ್ಮೆಗಾಂವ್ ಗ್ರಾಮದ ನಿವಾಸಿಗಳಾದ ಕಚರಾಬಾಯಿ ಕೆರಬಾ (30) ಮತ್ತು ಕಿಶನ್ ವಿಟ್ಠಲ್(28) ಎಣ್ಣುವವರು ಮೃತ ದುರ್ದೈವಿಗಳಾಗಿದ್ದಾರೆ. ಘಟನೆಯಲ್ಲಿ ಅರ್ಚನಾ ಮತ್ತು ಕೆರಬಾ ರಾಮಚಂದ್ರ ಎಂಬುವರಿಗೆ ಸುಟ್ಟ ಗಾಯಗಳಾಗಿದ್ದು, ಔರಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಲದಲ್ಲಿ ಸೋಯಾಬಿನ್ ಬೆಳೆ ಕಟಾವು ಮಾಡುತ್ತಿದ್ದಾಗ ಒಮ್ಮಲೆ ಮಳೆ ಬಂದಿದೆ. ಹೀಗಾಗಿ ಮಳೆಯಿಂದ ರಕ್ಷಣೆ ಪಡೆಯಲು ಮರದಡಿಗೆ ಹೋಗಿದ್ದಾರೆ. ಈ ವೇಳೆ ಸಿಡಿಲು ಬಡಿದಿದೆ. ಸ್ಥಳಕ್ಕೆ ಠಾಣಾಕುಶನೂರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next