Advertisement

ಎಸ್ಸೆಸ್ಸೆಲ್ಸಿ :1727 ಪರೀಕ್ಷಾರ್ಥಿ ಗೈರು

04:44 PM Jul 02, 2020 | Team Udayavani |

ಬೀದರ: ಕೋವಿಡ್‌-19 ವೈರಸ್‌ ಭೀತಿ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೀದರನಲ್ಲಿ ಶಿಕ್ಷಣ ಇಲಾಖೆಯಿಂದ ವಿಶೇಷ ವ್ಯವಸ್ಥೆಗಳ ಮೂಲಕ ಪಾರದರ್ಶಕ ಮತ್ತು ಜಾಗರೂಕತೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದೆ. ಬುಧವಾರದ ಸಮಾಜ ವಿಜ್ಞಾನ ವಿಷಯ ಪರೀಕ್ಷೆಗೆ 23,319 ಪರೀಕ್ಷಾರ್ಥಿಗಳು ಹಾಜರಾಗಿದ್ದರು.

Advertisement

ಪರೀಕ್ಷೆಗೆ ಒಟ್ಟು 25,046 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ಇದರಲ್ಲಿ ನೆರೆ ರಾಜ್ಯದ 16 ಮತ್ತು ವಲಸೆ 437 ಮಕ್ಕಳು ಸೇರಿ ಒಟ್ಟು 23,319 ಜನ ಪರೀಕ್ಷೆ ಬರೆದಿದ್ದರೆ 1727 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 74 ಜನ ಕಂಟೈನ್ಮೆಂಟ್‌ ಪ್ರದೇಶಗಳಿಂದ ಬಂದವರು ಇದ್ದರು. ಅನಾರೋಗ್ಯ ಕಾರಣದಿಂದ 22 ಮಕ್ಕಳಿಗೆ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next