Advertisement
ತಾಲೂಕಿನೊಂದಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ರಕ್ತ ಸಂಬಂಧವಿದೆ. ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಔರಾದ ಪಟ್ಟಣದ ಮಗ ಹಾಗೂ ನಿವಾಸಿ. ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ತಾಲೂಕಿನ ನಾಗೂರ ಗ್ರಾಮದ ಮೊಮ್ಮಗ. ಹೀಗಾಗಿ ತಾಲೂಕಿನಲ್ಲಿ ಮಗ ಗೆಲ್ತಾನಾ? ಇಲ್ಲವೇ ಮೊಮ್ಮಗ ಗೆಲ್ತಾನಾ ಎಂಬ ರಾಜಕೀಯ ಚರ್ಚೆ ಬಿರುಸುಗೊಂಡಿದೆ.
Related Articles
Advertisement
ಬೀಗುತ್ತಿರುವ ಉಭಯ ಮುಖಂಡರು: ಬಿಜೆಪಿ ಮುಖಂಡರು ಪ್ರಧಾನಿ ಮೋದಿ ಅಲೆಯಲ್ಲಿ ಗೆಲುವು ನಮ್ಮದೇ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ದಿ. ಧರಂಸಿಂಗ್ ಸೋಲಿಸಿದ ನಮ್ಮ ನಾಯಕರು ಈ ಬಾರಿ ಭಾಲ್ಕಿ ತಾಲೂಕಿನ ಶಾಸಕರಿಗೆ ಸೋಲುಣಿಸುವುದರಲ್ಲಿ ಎರಡು ಮಾತಿಲ್ಲವೆಂದು ಬೀಗುತ್ತಿದ್ದಾರೆ.
ಆದರೆ ಇತ್ತ ತಾಲೂಕಿನ ಇತಿಹಾಸದಲ್ಲಿಯೇ ಕೈ ಪಕ್ಷದ ನಾಯಕರು ಕಠಿಣ ಪರಿಶ್ರಮ ಮಾಡಿದ್ದಾರೆ. ಅತಿ ಹೆಚ್ಚು ಶಾಸಕರು ನಮ್ಮ ಪಕ್ಷದವರೇ ಆಗಿದ್ದಾರೆ. ಈಶ್ವರ ಖಂಡ್ರೆ ಉತ್ತಮ ವ್ಯಕ್ತಿತ್ವ ಉಳ್ಳ ನಾಯಕರಾಗಿದ್ದಾರೆ. ತಂದೆ ಭೀಮಣ್ಣ ಖಂಡ್ರೆ ಸಾರಿಗೆ ಸಚಿವರಾಗಿದ್ದಾಗ ಮಾಡಿದ ಅಭಿವೃದ್ಧಿ ಕೆಲಸ ಹಾಗೂ ಈಶ್ವರ ಖಂಡ್ರೆ ಸಚಿವರಾಗಿದ್ದಾಗ ಮಾಡಿದ ಕೆಲಸಗಳೇ ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎನ್ನುತ್ತಿದ್ದಾರೆ.
ಆದರೆ ವಿಜಯಲಕ್ಷ್ಮೀ ಯಾರ ಪಾಲಿಗೆ ಒಲಿಯುತ್ತಾಳೆ ಎನ್ನುವುದು ಮಾತ್ರ ಇನ್ನೂ ಇನ್ನೂ ಒಂದು ತಿಂಗಳ ನಂತರವೇ ತಿಳಿದುಬರಬೇಕಿದೆ.
ಬೆಟ್ಟಿಂಗ್ ಹಾವಳಿ: ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಖಚಿತವಾಗಿದೆ ಎಂದು ಸಾರ್ವಜನಿಕ ಸ್ಥಳದಲ್ಲಿಯೇ ಕುಳಿತು ಬೆಟ್ಟಿಂಗ್ ಹಚ್ಚುತ್ತಿರುವುದು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನಡೆಯುತ್ತಿವೆ. ಇನ್ನೂ ವಿವಿಧ ಪಕ್ಷದ ಮುಖಂಡರು ತಮ್ಮ ನಾಯಕರಿಗೆ ತಮ್ಮ ವಾರ್ಡ್ ಹಾಗೂ ಗ್ರಾಮದಲ್ಲಿನ ನಡೆದ ಮತದಾನದ ಪ್ರಮಾಣ ತಿಳಿಸಲು ಅವರಿರುವ ಸ್ಥಳಕ್ಕೆ ಹೋಗಿದ್ದಾರೆ ಎನ್ನುವ ಮಾತುಗಳಿವೆ.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಇದೆ. ಈ ಅಲೆಯಲ್ಲಿ ನಮ್ಮ ಅಭ್ಯರ್ಥಿಗೆ ಗೆದ್ದೇ ಗೆಲ್ಲುತ್ತಾರೆ. ಅದರಲ್ಲಿ ಯಾವುದೇ ರೀತಿಯ ಸಂದೇಹ ಬೇಡ.•ಸತೀಶ ಪಾಟೀಲ,
ಬಿಜೆಪಿ ತಾಲೂಕು ಅಧ್ಯಕ್ಷ ಬೀದರ ಜಿಲ್ಲೆಯಲ್ಲಿ ಮೋದಿ ಮೋಡಿ ನಡೆಯುವುದಿಲ.್ಲ ಇಲ್ಲಿನ ಜನರು ಉತ್ತಮ ಅಭಿವೃದ್ಧಿ ಕೆಲಸ ಮಾಡುವ ವ್ಯಕ್ತಿ ಆಯ್ಕೆ ಮಾಡುತ್ತಾರೆ. ಬಿಜೆಪಿ ಪಕ್ಷದವರು ಏನೇ ಹೇಳಿದ್ರೂ ಗೆಲುವು ಖಂಡಿತವಾಗಿ ನಮ್ಮದೇ. ಇದರಲ್ಲಿ ಅನುಮಾನವೇ ಬೇಡ.
•ರಾಜಕುಮಾರ ಹಲ್ಬರ್ಗೆ,
ಕಾಂಗ್ರೆಸ್ ತಾಲೂಕು ಅಧ್ಯಕ್ಷ ರವೀಂದ್ರ ಮುಕ್ತೇದಾರ್