Advertisement

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

01:16 PM Apr 25, 2024 | Team Udayavani |

ಬೀದರ್: ಹುಬ್ಬಳ್ಳಿ ವಿದ್ಯಾರ್ಥಿನಿ ‌ನೇಹಾ‌ ಹಿರೇಮಠ ಹತ್ಯೆ ಘಟನೆ ಖಂಡನೀಯ. ಕುಟುಂಬಕ್ಕೆ ದೊಡ್ಡ ಅನ್ಯಾಯವಾಗಿದೆ. ಇದರಲ್ಲಿ ಬಿಜೆಪಿಯವರು ರಾಜಕೀಯ‌ ಮಾಡುವುದು ಸರಿಯಲ್ಲ ಎಂದು ಸಿಎಂ ಸಿದ್ಧರಾಮಯ್ಯ‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಕರಣವನ್ನು ಸಿಐಡಿಗೆ‌ ವಹಿಸಲಾಗಿದ್ದು, ಶೀಘ್ರ ಚಾರ್ಜ್ ಶಿಟ್ ಹಾಕಿ ಟ್ರಯಲ್ ಆರಂಭಿಸಲಿದ್ದಾರೆ. ವಿಶೇಷ ನ್ಯಾಯಾಲಯ ಸ್ಥಾಪಿಸಿ, ಆರೋಪಿಗೆ ಘೋರ ಶಿಕ್ಷೆ ಕೊಡಿಸಬೇಕು. ಈ ಬಗ್ಗೆ ಪೊಲೀಸರು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಜತೆ ಮಾತನಾಡಿದ್ದೇನೆ ಎಂದರು.

ನೇಹಾ‌ ತಂದೆ ಜತೆಗೆ ನಾನು‌ ಮಾತನಾಡಿದ್ದು, ಸರ್ಕಾರ ಕೈಗೊಂಡಿರುವ ಕ್ರಮವಾಗಿ ‌ಬಗ್ಗೆ ತಿಳಿಸಿದ್ದೇನೆ. ನೇಹಾ‌ ಮನೆಗೂ ನಾನು ಭೇಟಿ ನೀಡಲಿದ್ದೇನೆ ಎಂದರು.

ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಹೇಳುತ್ತಿರುವ ಬಿಜೆಪಿಯವರಿಗೆ ಯಾವ ನೈತಿಕ ಹಕ್ಕಿದೆ. ಬಿಜೆಪಿ‌ ಅಧಿಕಾರದಲ್ಲಿದ್ದಾಗ ಎಷ್ಟು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದಾರೆ ಹೇಳಲಿ. ನಾನು ಹಿಂದೆ‌ ಸಿಎಂ ಇದ್ದಾಗ ಅನೇಕ ‌ಪ್ರಕರಣಗಳನ್ನ ಸಿಬಿಐಗೆ ವಹಿಸಿದ್ದೆ ಎಂದು ಸಿಎಂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next