Advertisement

‘ಮರಳಿ ಬಾ ಮನ್ವಂತರವೇ’ ಆಧಾರಿತ ಚಿತ್ರದಲ್ಲಿ ಬೀದರ್ ಚೆಲುವೆ ಸುಲಕ್ಷಾ ಕೈರಾ

06:39 PM Jan 09, 2024 | Team Udayavani |

ಕಾದಂಬರಿ ಆಧಾರಿ ಚಿತ್ರಗಳ ಕೊರತೆ ಇರುವ ಹೊತ್ತಿನಲ್ಲಿ ಸುಪ್ರಧಾ ಫಿಲ್ಮ್ಸ್ ಲಾಂಛನದಡಿ ನಿರ್ಮಾಪಕ ವಿಜಯೇಂದ್ರ ಒಡೆಯರ್ ಕಾದಂಬರಿ ಆದರಿಸಿ ಕನ್ನಡ ಚಿತ್ರ ನಿರ್ಮಿಸುತ್ತಿದ್ದಾರೆ. ಅವರ ಚೊಚ್ಚಲ ನಿರ್ಮಾಣದ ಸಿನಿಮಾಗೆ ಸಾಹಿತಿ ಪಂಕಜಾ ವಿಜೇಂದ್ರ ಕೃತಿ ‘ಮರಳಿ ಬಾ ಮನ್ವಂತರವೇ’ ಆಯ್ದುಕೊಂಡಿದ್ದಾರೆ.

Advertisement

ಪತ್ರಕರ್ತ ಅರಕಲಗೂಡು ಜಯಕುಮಾರ್ ‘ಮರಳಿ ಬಾ ಮನ್ವಂತರವೇ’ ಚಲನಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಾಹಿತಿ – ಕವಿ ರೂಪ ಹಾಸನ ಇದೇ ಮೊದಲ ಬಾರಿಗೆ ಈ ಚಿತ್ರಕ್ಕಾಗಿ ಗೀತ ಸಾಹಿತ್ಯ ಬರೆದಿದ್ದಾರೆ. ಈ ಚಿತ್ರದ ಇನ್ನೊಂದು ವಿಶೇಷವೆಂದರೆ ರಾಂಗೋಪಾಲ್ ವರ್ಮಾ ತೆಲುಗು ಚಿತ್ರರಂಗಕ್ಕೆ ಪರಿಚಯಿಸಿದ ಆನೆಂ ವೆಂಕಟರಾವ್, ಛಾಯಾಗ್ರಹಣ ಹಾಗೂ ಡಿಓಪಿ ಹೊಣೆ ಹೊತ್ತಿದ್ದಾರೆ.

ಲಿಂಗತ್ವ ಅಸಮಾನತೆ ಹಾಗೂ ಜಾತಿ ಸೂಕ್ಷ್ಮದ ಎಳೆಯನ್ನು ಹೊಂದಿರುವ ಕಥಾವಸ್ತುವಿನ ಸಿನಿಮಾಗೆ ಕೃತಿಯ ಹೆಸರನ್ನೆ ಇರಿಸಲಾಗಿದೆ. ಮರಳಿ ಬಾ ಮನ್ವಂತರೇ ಚಿತ್ರ ಮಹಿಳಾ ಪ್ರಧಾನ ಕಥಾವಸ್ತುವನ್ನು ಹೊಂದಿದ್ದು ಮುಖ್ಯ ಭೂಮಿಕೆಯಲ್ಲಿ ಬೀದರ್ ಮೂಲದ ಸುಲಕ್ಷಾ ಕೈರಾ ನಟಿಸುತ್ತಿದ್ದಾರೆ.

ಸ್ನೇಹಿತ, ವರ್ಣಿಕಾ ಚಿತ್ರಗಳು ಸೇರಿದಂತೆ ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣಗೊಂಡ ಚಿತ್ರ ಸೇಡು, ತಮಿಳಿನಲ್ಲಿ ನಿರ್ಮಾಣವಾಗುತ್ತಿರುವ ಎಬಿ ಪಾಸಿಟೀವ್ ಚಿತ್ರದಲ್ಲಿ ನಟಿಸುತ್ತಿರುವ ಅವರಿಗೆ ‘ಮರಳಿ ಬಾ ಮನ್ವಂತರವೇ… ಚಿತ್ರದ ಪಾತ್ರ ವೃತ್ತಿ ಜೀವನದ ಮಹತ್ವದ ಪಾತ್ರವಾಗಿದೆ. ಇದಕ್ಕಾಗಿ ಸಾಕಷ್ಟು ತಯಾರಿ ನಡೆಸಿರುವ ಅವರು ಇದೀಗ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

Advertisement

ಬೀದರ್ ನಿಂದ ಸಿನಿಮಾ ಕ್ಷೇತ್ರಕ್ಕೆ ಸುಲಕ್ಷಾ ಕೈರಾ ಭರವಸೆಯ ಕೊಡುಗೆಯಾಗಿದ್ದಾರೆ. ಇವರ ಜೋಡಿಯಾಗಿ ಹಾಸನ ಜಿಲ್ಲೆಯ ಅರಕಲಗೂಡಿನ ಹೊಸ ಪ್ರತಿಭೆ ಆರ್ಯನ್ ಕನ್ನಡ ಚಿತ್ರರಂಗಕ್ಕೆ ನಾಯಕರಾಗಿ ಪರಿಚಯವಾಗುತ್ತಿದ್ದಾರೆ. ಕಿರು ತೆರೆಯಲ್ಲಿ ಸದ್ದು ಮಾಡಿರುವ ಬಾಲ ನಟಿ ರೀತುಸಿಂಗ್ (ಸಿಹಿ) ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ರಾಮನಗರ ಜಿಲ್ಲೆಯ ಕೆಂಗಲ್ ವೀರಾಂಜನೇಯ ದೇಗುಲದ ಆವರಣದಲ್ಲಿ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು. ದೇಗುಲ ಟ್ರಸ್ಟ್ ಅಧ್ಯಕ್ಷ ಚಂದ್ರು ಹಾಗೂ ಉದ್ಯಮಿ ಜಗದೀಶ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭಹಾರೈಸಿದರು. ನಾಯಕ-ನಾಯಕಿ ಮದುವೆ ದೃಶ್ಯಗಳನ್ನು ಈ ಸಂದರ್ಭದಲ್ಲಿ ಚಿತ್ರೀಕರಿಸಿ ಕೊಳ್ಳಲಾಯಿತು. ಕೊಪ್ಪಳ ಜಿಲ್ಲೆಯ ಸಂಗಮೇಶ್ ಗದ್ದಿ ಸಹ ನಿರ್ದೇಶನ, ಮಹೇಶ ಉಣಚಗೇರಿ, ಯುವ ಪತ್ರಕರ್ತೆ ಸಾನಿಯಾ ಶಿವಮೊಗ್ಗ ಸಹಾಯಕ ನಿರ್ದೇಶಕರಾಗಿದ್ಧಾರೆ. ಅನಂತ ಆರ್ಯನ್ ಸಂಗೀತ, ಉದಯ ಜಗಳೂರು ಸಂಕಲನ ಮಾಡುತ್ತಿದ್ದಾರೆ. ಬೆಂಗಳೂರು, ಚನ್ನಪಟ್ಟಣ ತಾಲೂಕಿನ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ.

ಚಿತ್ರದ ತಾರಾಗಣದಲ್ಲಿ ಸುಲಕ್ಷಾ ಕೈರಾ , ಆರ್ಯನ್, ಬಾಲ ನಟಿ ರೀತು ಸಿಂಗ್ , ಮೂಗು ಸುರೇಶ್, ಮಯೂರ್, ಶ್ರೀ ಪರಿಣೀತಿ, ಸಾನಿಯಾ, ಜ್ಯೋತಿಕಾ, ಅನ್ನಪೂರ್ಣ, ಎಚ್ ಎಲ್ ಜನಾರ್ಧನ್, ಜಿ ಆರ್ ಜಗದೀಶ್ ಮತ್ತಿತರರು ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next