Advertisement

ನೀರಿನಲ್ಲಿ ಕೊಚ್ಚಿಹೋದ ತಾಯಿ ಮತ್ತು ಇಬ್ಬರು ಮಕ್ಕಳು: ರಕ್ಷಣಾ ತಂಡದಿಂದ ಶೋಧ ಕಾರ್ಯ

08:29 PM Apr 30, 2023 | Team Udayavani |

ಬೀದರ್: ನದಿ ದಾಟುವ ವೇಳೆ ತುಂಬಿ ಹರಿಯುತ್ತಿದ್ದ ನದಿಯಲ್ಲಿ ತಾಯಿ‌ ಮತ್ತು‌ ಇಬ್ಬರು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಔರಾದ ತಾಲೂಕಿನ ಹೆಡಗಾಪುರ್ ಗ್ರಾಮದಲ್ಲಿ ರವಿವಾರ ಸಾಯಂಕಾಲ ನಡೆದಿದ್ದು, ಶೋಧ ಕಾರ್ಯ ಮುಂದುವರೆದಿದೆ.

Advertisement

ಜಿಲ್ಲೆಯಲ್ಲಿ ಕಳೆದೆರಡು‌ ದಿನಗಳಿಂದ ಅಕಾಲಿಕ ಮಳೆ ಆರ್ಭಟಿಸುತ್ತಿದ್ದು, ನಾಲಾ ಮತ್ತು ಸೇತುವೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಹೆಡಗಾಪುರ್- ಚಂದ್ರಾ ಮಹಾರಾಜ್ ಮಧ್ಯದ ಸೇತುವೆ ಸಹ ತುಂಬಿ ಹರಿಯುತ್ತಿದ್ದು, ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುವಾಗ ಒಂದೇ ಕುಟುಂಬದ ಮೂವರು ಕೊಚ್ಚಿ ಹೋಗಿದ್ದಾರೆ.

ಗ್ರಾಮದ ಸುನಂದಾ ಲದ್ದೆ (45), ಆಕೆಯ ಮಕ್ಕಳಾದ ಐಶ್ವರ್ಯ (16) ಮತ್ತು ಸುಮಿತ್ (10) ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಈ ವೇಳೆ ಸುನಂದಾ ಅವರ ಪತಿ ಸಂಗಪ್ಪ ಈಜಿಕೊಂಡು‌ ದಡ ಸೇರಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿ ಶಾಮಕ ದಳ ಸಿಬ್ಬಂದಿಗಳು ಮುಖಾಂ ಹೂಡಿದ್ದು, ಶೋಧ ಕಾರ್ಯ ಮುಂದುವರೆಸಿದ್ದಾರೆ. ಘಟನೆ ಕುರಿತು ಠಾಣಾಕುಶಮೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Mysuru; ಪ್ರಧಾನಿ ಮೋದಿ ಬೃಹತ್‌ ರೋಡ್‌ ಶೋ: ತೂರಿ ಬಂದ ಮೊಬೈಲ್!

Advertisement

Udayavani is now on Telegram. Click here to join our channel and stay updated with the latest news.

Next