Advertisement
ಆರ್ಟಿಐ ಕಾರ್ಯಕರ್ತ ರಾಜು ಮಹಾಂತ, ಅಸ್ಸಾಂ ಜನರಿಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದಾರೆ. ಸಿದ್ಧಗಂಗಾ ಮಠಾಧೀಶ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ನೀಡುವುದರ ಬದಲಿಗೆ ಓರ್ವ ಗಾಯಕ (ಭೂಪೇನ್ ಹಜಾರಿಕಾ) ಹಾಗೂ ಆರೆಸ್ಸೆಸ್ ಸಿದ್ಧಾಂತವನ್ನು ಪ್ರಚಾರ ಮಾಡಿದ (ನಾನಾಜಿ ದೇಶ್ಮುಖ್) ವ್ಯಕ್ತಿಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ ಎಂದು ಖರ್ಗೆ ಶನಿವಾರ ಟ್ವೀಟ್ ಮಾಡಿದ್ದರು. ಭೂಪೇನ್ರನ್ನು ಕೇವಲ ಓರ್ವ ಗಾಯಕ ಎಂದು ಉಲ್ಲೇಖೀಸಿದ್ದಕ್ಕೆ ಖರ್ಗೆ ಕ್ಷಮೆ ಕೇಳಬೇಕು ಎಂದು ಮಹಾಂತ ಆಗ್ರಹಿಸಿದ್ದಾರೆ. Advertisement
ಭೂಪೇನ್ಗೆ ಅವಮಾನ ಖರ್ಗೆ ವಿರುದ್ಧ ಕೇಸು
12:30 AM Jan 28, 2019 | |
Advertisement
Udayavani is now on Telegram. Click here to join our channel and stay updated with the latest news.