Advertisement

ಈಗಲೂ ಸಿದ್ದು ಸಿಎಂ: ಭೋವಿ ಜಗದ್ಗುರು

01:21 AM Feb 22, 2019 | Team Udayavani |

ಬಾಗಲಕೋಟೆ: ಸಿದ್ದರಾಮಯ್ಯ ಅವರನ್ನು ನಾವು ಮಾಜಿ ಸಿಎಂ ಎಂದು ಕರೆಯಲು ಬಯಸುವುದಿಲ್ಲ. ನಮಗೆ ಅವರು ಇಂದಿಗೂ ಮುಖ್ಯಮಂತ್ರಿ. ಭೋವಿ ಕುಟುಂಬಗಳಿಗೆ ವಸತಿ ಕಲ್ಪಿಸಿದರೆ ಸಿದ್ದರಾಮಯ್ಯನವರಿಗೆ ದೇಗುಲ ಕಟ್ಟಿಸುವುದಾಗಿ ಭೋವಿ ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

Advertisement

ಬಾದಾಮಿಯಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿಯಲ್ಲಿ ಮಾತನಾಡಿದ ಶ್ರೀಗಳು,ಹಿಂದುಳಿದ ನಮ್ಮ ಭೋವಿ ಸಮಾಜವನ್ನು ಗುರುತಿಸಿದ್ದು ಸಿದ್ದರಾಮಯ್ಯ ಅವರೊಬ್ಬರೇ. ಅವರನ್ನು ನಾವು ಮಾಜಿ ಎಂದು ಕರೆಯಲು ಬಯಸಲ್ಲ.

ಬಾದಾಮಿಯ ಸುಮಾರು 100ಕ್ಕೂ ಹೆಚ್ಚು ಭೋವಿ ಕುಟುಂಬಗಳು ಸರ್ಕಾರಿ ಭೂಮಿಯಲ್ಲಿ ವಾಸವಾಗಿದ್ದಾರೆ. ಅವರನ್ನು ಈಗ ತೆರವುಗೊಳಿಸಲಾಗುತ್ತಿದೆ. ಅದೇ ಜಾಗದಲ್ಲಿ ಅವರಿಗೆ ಸೂರು ಕಲ್ಪಿಸಬೇಕು. ಈ ಕೆಲಸ ಮಾಡಿದರೆ ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರ ದೇವಸ್ಥಾನ ಕಟ್ಟಿಸುತ್ತೇವೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next