Advertisement

ಮೋದಿಯನ್ನು ಕೊಲ್ಲಲು ಯಾಕೆ ಬಾಂಬ್ ತಯಾರಿಸಿಲ್ಲ: ವಿವಾದ ಸೃಷ್ಟಿಸಿದ ಮಾಜಿ ಶಾಸಕ

12:47 PM Oct 05, 2020 | keerthan |

ಭೋಪಾಲ್: ಇಂದಿರಾ ಗಾಂಧಿಯವರನ್ನು ಹತ್ಯೆ ಮಾಡಲು ಮದ್ದು ಗುಂಡುಗಳು ಇದ್ದವು. ಆದರೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಯಾರೂ ಯಾಕೆ ಬಾಂಬ್ ತಯಾರಿಸಲು ಸಾಧ್ಯವಾಗಿಲ್ಲ ಎಂದು ಜೆಜಿಪಿ ಮಾಜಿ ಶಾಸಕರೊಬ್ಬರು ಹೇಳಿಕೆ ನೀಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.

Advertisement

ಮಧ್ಯಪ್ರದೇಶದ ಮಾಜಿ ಶಾಸಕ ರಾಮ್ ಗುಲಂ ಈ ವಿವಾದಾತ್ಮಕ ಹೇಳಿಕೆ ನೀಡಿದವರು. ಸಿಯೋನಿ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, ಒಬ್ಬ ವ್ಯಕ್ತಿ130 ಕೋಟಿ ಜನರ ಇಡೀ ದೇಶವನ್ನು ಮರುಳು ಮಾಡುತ್ತಿದ್ದಾನೆ. ಕೇಂದ್ರ ಸರ್ಕಾರವು ಮಹಾಮಾರಿ ಕೋವಿಡ್ ವೈರಸ್ ವಿರುದ್ಧ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ:ಅಟಲ್‌ ಆಯ್ತು, ಈಗ ಶಿಂಕು-ಲಾ ಸುರಂಗ: ಮೂರು ವರ್ಷದಲ್ಲಿ ಕಾಮಗಾರಿ ಮುಗಿಸಲು ಮೋದಿ ಸೂಚನೆ

ಅದಲ್ಲದೆ ಬಾಂಬ್‌ಗಳನ್ನು ಉತ್ಪಾದನೆ ಮಾಡುವುದನ್ನು ಈಗ ನಿಲ್ಲಿಸಲಾಗಿದೆಯಾ? ಇಂದಿರಾ ಗಾಂಧಿಯನ್ನು ಹತ್ಯೆ ಮಾಡಲು ಮದ್ದು ಗುಂಡುಗಳು ಇದ್ದವು, ರಾಜೀವ್ ಗಾಂಧಿಯನ್ನು ಕೊಲ್ಲಲು ಮಾನವ ಬಾಂಬ್ ರೆಡಿಯಾಗಿತ್ತು ಆದರೆ ಮೋದಿಯನ್ನು ಕೊಲ್ಲಲು ಯಾಕೆ ಯಾರೂ ಬಾಂಬ್ ತಯಾರಿಸಲು ಸಾಧ್ಯವಾಗಿಲ್ಲ ಎಂದು ಮಾಜಿ ಶಾಸಕ ರಾಮ್ ಗುಲಂ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next