Advertisement

Bhopal: ಶ್ವಾನ ತುಳಿದವ ಪೊಲೀಸರ ವಶಕ್ಕೆ

10:03 PM Dec 10, 2023 | Team Udayavani |

ಭೋಪಾಲ್‌: ಪ್ರೀತಿಯಿಂದ ಬಾಲ ಆಡಿಸುತ್ತಾ ಕಾಲ ಬಳಿ ಬಂದ ನಾಯಿ ಮರಿಯನ್ನು ವ್ಯಕ್ತಿ ಎತ್ತಿ ರಸ್ತೆಗೆ ಬಿಸಾಡಿ, ಕಾಲಿನಿಂದ ತುಳಿದು ಹಿಂಸಿಸಿರುವ ಅನಾಗರಿಕ ಘಟನೆ ಮಧ್ಯಪ್ರದೇಶದ ಗುಣಾದಲ್ಲಿ ನಡೆದಿದೆ. ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರಿಂದ ಟೀಕೆಗೆ ಗುರಿಯಾಗಿದೆ.

Advertisement

ಈ ಬಗ್ಗೆ ಅಂಗಡಿ ಮಾಲೀಕರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ಅದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಕೂಡಲೇ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಪೊಲೀಸರು ಕೃತ್ಯವೆಸಗಿದಾತನನ್ನು ವಶಕ್ಕೆ ಪಡೆದುಕೊಂಡಿದ್ದರೆ. ಕೇಂದ್ರ ಸಚಿವ ಜೋತಿರಾಧಿತ್ಯ ಸಿಂಧ್ಯಾ ಸೇರಿದಂತೆ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next