Advertisement

ಬಿಜೆಪಿ ಪರ ಪ್ರಚಾರ: ಭೋಜ್‌ಪುರಿ ನಟ ಪವನ್‌ ಸಿಂಗ್‌ ಮೇಲೆ ದಾಳಿ

09:37 AM May 16, 2019 | Vishnu Das |

ಮೊಹಾಲಿ: ಇಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದ ಭೋಜ್‌ಪುರಿ ನಟ, ಗಾಯಕ ಪವನ್‌ ಸಿಂಗ್‌ ಅವರ ಮೇಲೆ ದಾಳಿ ನಡೆಸಲಾಗಿದೆ.

Advertisement

ಬೃಹತ್‌ ಸಮಾವೇಶದಲ್ಲಿ ಮಾತನಾಡುತ್ತಿದ್ದ ವೇಳೆ ಕೆಲ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ. ಈ ಬಗ್ಗೆ ಪವನ್‌ ಸಿಂಗ್‌ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಪಂಜಾಬ್‌ ಸರ್ಕಾರವೇ ನಮ್ಮ ಮೇಲೆ ದದಾಳಿ ನಡೆಸಿದೆ. ಪೊಲೀಸರು ದಾಳಿ ನಡೆದಾಗ ತಮಾಷೆನೋಡುತ್ತಿದ್ದರು. ಬಿಜೆಪಿ ಕಾರ್ಯಕರ್ತರ ಸಹಾಯದಿಂದ ನನ್ನನ್ನು ನಾನೇ ರಕ್ಷಸಿಕೊಂಡೆ ಎಂದು ಪವನ್‌ ಬರೆದುಕೊಂಡಿದ್ದಾರೆ.

ಹಲವು ಭೋಜ್‌ಪುರಿ ತಾರೆಯರು ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದು, ಖ್ಯಾತ ನಟರಾದ ರವಿಕಿಶನ್‌ ಮತ್ತು ದಿನೇಶ್‌ ಲಾಲ್‌ ಯಾದವ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next