Advertisement

ಟ್ರೇನಿಂಗ್‌ಗೆ ಹಾಜರಾದ ಭೀಮಕ್ಕ

11:03 AM Dec 20, 2019 | Suhan S |

ಧಾರವಾಡ: ಭಾರತೀಯ ಸೇನೆಗೆ ಆಯ್ಕೆಗೊಂಡಿದ್ದ ತಾಲೂಕಿನ ಮದಿಕೊಪ್ಪ ಭೀಮಕ್ಕ ಚವ್ಹಾಣ ಒಂದು ವರ್ಷದ ಟ್ರೇನಿಂಗ್‌ ಗಾಗಿ ಬೆಂಗಳೂರಿನಲ್ಲಿರುವ ಸೇನಾ ಪೊಲೀಸ್‌ ತರಬೇತಿ ಕೇಂದ್ರಕ್ಕೆ ಹಾಜರಾಗಿದ್ದಾರೆ.

Advertisement

ಗ್ರಾಮಸ್ಥರು ಹಾಗೂ ಮನೆಯ ಕುಟುಂಬಸ್ಥರು ಭೀಮಕ್ಕಳಿಗೆ ಸನ್ಮಾನಿಸಿ, ಹಾರೈಸಿ ಕಳುಹಿಸಿದ್ದಾರೆ. ಡಿ.17ರಂದು ಬಸ್‌ ಮೂಲಕ ಮಂಗಳೂರು ವಿಭಾಗಕ್ಕೆ ಹಾಜರಾಗದ ಭೀಮಕ್ಕ, ಮುಂದಿನ ಟ್ರೇನಿಂಗ್‌ ಪಡೆಯಲು ಬೆಂಗಳೂರಿಗೆ ಹಾಜರಾಗಲು ಬೇಕಾದ ಪ್ರಕ್ರಿಯೆ ಮುಗಿಸಿದ್ದಾರೆ. ಇದಾದ ಬಳಿಕ ಮಂಗಳೂರಿನಿಂದ ಬೆಂಗಳೂರಿನ ಸೇನಾ ಪೊಲೀಸ್‌ ತರಬೇತಿ ಕೇಂದ್ರಕ್ಕೆ ಡಿ.18ಕ್ಕೆ ಹಾಜರಾಗಿದ್ದು, ಒಂದು ವರ್ಷದ ಟ್ರೇನಿಂಗ್‌ ಪಡೆಯಲಿದ್ದಾರೆ. ಡಿ.19ರಿಂದ ಟ್ರೇನಿಂಗ್‌ ಸಹ ಆರಂಭಗೊಂಡಿದೆ. ದೇಶದ ವಿವಿಧ ಭಾಗದಿಂದ ಆಯ್ಕೆಯಾದ 100 ಯುವತಿಯರು ಈ ಕೇಂದ್ರಕ್ಕೆ ಹಾಜರಾಗಿದ್ದು, ರಾಜ್ಯದಿಂದ ಹಾಜರಾಗಿರುವ 8 ಯುವತಿಯರ ಪೈಕಿ ಭೀಮಕ್ಕಳೂ ಒಬ್ಬರು. ಒಂದು ವರ್ಷದ ಅವಧಿಯ ಟ್ರೇನಿಂಗ್‌ ಮುಗಿದ ಬಳಿಕ ಸೇನೆಯಲ್ಲಿ ಸೇವೆ ಸಲ್ಲಿಸುವ ಭಾಗ್ಯ ಈ ಯುವತಿಯರ ಪಾಲಾಗಲಿದೆ.

ಬಡ ಕುಟುಂಬದ ಪ್ರತಿಭೆ: ಸರಕಾರಿ ಕನ್ನಡ ಶಾಲೆಯಲ್ಲಿ ಕಲಿತ ಭೀಮಕ್ಕಳದ್ದು ಬಡ ಕುಟುಂಬ. ತಂದೆ ಮಹದೇವಪ್ಪ, ತಾಯಿ ನೀಲಮ್ಮ ಕೂಲಿ ಮಾಡಿಯೇ ಮಕ್ಕಳು ಸಲಹುತ್ತಿದ್ದಾರೆ. ಶಾಲೆಯ ರಜೆ ದಿನಗಳಲ್ಲಿ ಪೋಷಕರೊಂದಿಗೆ ಕೂಲಿ ಕೆಲಸವನ್ನೂ ಮಾಡಿ ಪೋಷಕರ ಕಷ್ಟಗಳಿಗೆ ಕೈ ಜೋಡಿಸಿದ್ದ ಈ ಭೀಮಕ್ಕ, ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಬಿಕಾಂ ಪದವೀಧರೆ. ಮದಿಕೊಪ್ಪ ಗ್ರಾಮದಲ್ಲಿ ತಾನು ಕಲಿತ ಶಾಲೆಯಲ್ಲಿ ಕಷ್ಟಪಟ್ಟು ಮಾಡಿದ ವ್ಯಾಯಾಮ, ಪೋಷಕರ ಕಷ್ಟಗಳಿಗೆ ಕೈ ಜೋಡಿಸಲು ಮಾಡಿದ ಕೆಲಸಗಳೇ ಈಗ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆತಿದೆ.

Advertisement

Udayavani is now on Telegram. Click here to join our channel and stay updated with the latest news.

Next