Advertisement

ಫೆ.7ರಿಂದ ವಚನ ವಿಜಯೋತ್ಸವ

12:01 PM Jan 01, 2020 | Naveen |

ಬೀದರ: ನಗರದ ಬಸವ ಗಿರಿಯಲ್ಲಿ ಫೆ. 7ರಿಂದ ಮೂರು ದಿನಗಳ ಕಾಲ ವಚನ ವಿಜಯೋತ್ಸವವನ್ನು ವೈವಿಧ್ಯಮಯ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ತಾಯಿ ಹೇಳಿದರು.

Advertisement

ನಗರದ ಶರಣ ಉದ್ಯಾನದಲ್ಲಿ ಜರುಗಿದ ವಚನ ವಿಜಯೋತ್ಸವ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕನ್ನಡದ ಅಂತಃ ಸತ್ವ, ಮಾನವೀಯ ಮೌಲ್ಯಗಳ ಆಗರವಾದ ವಚನಗಳನ್ನು ಉಳಿಸಿಕೊಟ್ಟಿದ್ದರ ಹಿಂದೆ ಅನೇಕ ಶರಣರ ಬಲಿದಾನವಾಗಿದೆ. ವಚನ ಸಾಹಿತ್ಯ ಸಂರಕ್ಷಣೆಗಾಗಿ ತ್ಯಾಗ, ಬಲಿದಾನಗೈದವರ ಸಂಸ್ಮರಣೆಗಾಗಿ ಲಿಂಗಾಯತ ಮಹಾಮಠದಿಂದ ಪ್ರತಿವರ್ಷವೂ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದರು.

ವಿಜಯೋತ್ಸವವು ಕಲ್ಯಾಣ ಕರ್ನಾಟಕದ ಹೆಮ್ಮೆಯ ಉತ್ಸವವಾಗಿದ್ದು, ವರ್ಷದಿಂದ ವರ್ಷಕ್ಕೆ ರಾಜ್ಯಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಬಸವಾಭಿಮಾನಿಗಳ ಗಮನ ಸೆಳೆಯುತ್ತಿದೆ. ಬಸವಾದಿ ಶರಣರ ಆಶಯಗಳಂತೆ ಸಮಾರಂಭ ಆಯೋಜಿಸಲಾಗುತ್ತಿದ್ದು, ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ ಎಂದರು. ಸಮಾರಂಭದಲ್ಲಿ ವಚನಗಳಿಗೆ ಪಟ್ಟಕಟ್ಟಿ, ಹೂವಿನ ರಥದಲ್ಲಿ ಮೆರವಣಿಗೆ ಮಾಡಿ ವಚನಗಳಿಗೆ ಪರಮೋತ್ಛ ಗೌರವ ಸಲ್ಲಿಸಲಾಗುತ್ತಿದೆ ಎಂದು ನುಡಿದರು.

ಬೀದರ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ. ಶಟಕಾರ ಮಾತನಾಡಿ, ಬೀದರಗೆ ಗೌರವ ತಂದುಕೊಟ್ಟ ಕಾರ್ಯಕ್ರಮ ವಚನ ವಿಜಯೋತ್ಸವವಾಗಿದ್ದು, ನಾವೆಲ್ಲ ತನು-ಮನ-ಧನಗಳಿಂದ ಕಾರ್ಯಕ್ರಮದ ಯಶಸ್ಸಿಗೆ ದುಡಿಯೋಣ ಎಂದರು. ಭಾರತೀಯ ಬಸವ ಬಳಗದ ಅಧ್ಯಕ್ಷ ಬಾಬು ವಾಲಿಯವರು ಒಂದು ಸಾವಿರ ಯುವಕರನ್ನು ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ನೀಲ ನಕ್ಷೆಯನ್ನು ನೀಡಿದರು. ಬಸವ ಕೇಂದ್ರದ ಅಧ್ಯಕ್ಷ ಪ್ರಭುರಾವ್‌ ವಸ್ಮತೆ ಅವರು ಶರಣ ಸಂಸ್ಕೃತಿ ಉಳಿಸಿ-ಬೆಳೆಸುವ ವಚನ ವಿಜಯೋತ್ಸವಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿಯವರು ಕನ್ನಡ ಬೇರೆಯಲ್ಲ, ವಚನಗಳು ಬೇರೆಯಲ್ಲ. ಆದ್ದರಿಂದ ವಚನಗಳಿಗಾಗಿ ದುಡಿಯುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಗುರುನಾಥ ಕೊಳ್ಳೂರು ಮಾತನಾಡಿ, ಶಿಸ್ತು ಮತ್ತು ಅಚ್ಚುಕಟ್ಟುತನಕ್ಕೆ ಹೆಸರಾದ ವಿಜಯೋತ್ಸವವು ನಮ್ಮೆಲ್ಲರ ಮೌಲ್ಯವರ್ಧನೆಗೆ ಕಾರಣವಾಗಿದ್ದು, ಹೊರದೇಶಗಳಲ್ಲಿಯೂ ಬಸವ ಭಕ್ತರ ಗಮನ ಸೆಳೆದಿದೆ ಎಂದರು. ವಿರೂಪಾಕ್ಷ ಗಾದಗಿ, ವೀರಶೆಟ್ಟಿ ಪಟ್ನೆ ಮಾತನಾಡಿದರು. ಡಾ| ಗಂಗಾಂಭಿಕೆ ಅಕ್ಕ ನೇತೃತ್ವ, ಚಂದ್ರಶೇಖರ ಹೆಬ್ಟಾಳೆ ಅಧ್ಯಕ್ಷತೆ ವಹಿಸಿದ್ದರು.

Advertisement

ಶಂಕರೆಪ್ಪ ಹೊನ್ನಾ, ಸಿ.ಎಸ್‌. ಪಾಟೀಲ, ಸಂತೋಷ ತಾಳಂಪಳ್ಳಿ, ಸೂರ್ಯಕಾಂತ ಅಲ್ಮಾಜೆ, ಶ್ರೀಕಾಂತ ಸ್ವಾಮಿ, ರವಿ ಬೆಟ್ಟದ್‌, ಪ್ರಶಾಂತ ಭಾವಿಕಟ್ಟಿ, ಸಂಜು, ಶರಣಪ್ಪ ಮಿಠಾರೆ, ಸಿ.ಎಸ್‌. ಗಣಚಾರಿ, ಅಣವೀರ ಕೊಡಂಬಲ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next