Advertisement

ಯುವಕರು ದೇಶ ರಕ್ಷಣೆಗೆ ಶ್ರಮಿಸಲಿ

03:37 PM Jul 27, 2019 | Naveen |

ಬೀದರ: ಇಂದಿನ ದಿನಗಳಲ್ಲಿ ಯುವಕರಲ್ಲಿ ಸೇನೆ ಬಗ್ಗೆ ಆಸಕ್ತಿ ಕಡಿಮೆ ಆಗುತ್ತಿರುವುದು ಸರಿಯಲ್ಲ. ಯುವಕರು ದೇಶ ಪ್ರೇಮ ಬೆಳೆಸಿಕೊಂಡು, ದೇಶ ರಕ್ಷಣೆಗೆ ಮುಂದಾಗಬೇಕು ಎಂದು ಮಾಜಿ ಸೈನಿಕ ಬಕ್ಕಪ್ಪ ನಾಯಕ ಹೇಳಿದರು.

Advertisement

ನಗರದಲ್ಲಿ ಸಿದ್ಧಾರೂಢ ಸೇವಾ ಸಂಘದಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಯುವಕರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಎಲ್ಲರಿಗೂ ದೇಶ ಸೇವೆ ಮಾಡುವ ಅವಕಾಶ ದೊರೆಯುವುದಿಲ್ಲ. ಆದರೆ, ದೇಶ ಸೇವೆ ಮಾಡಲು ಅರ್ಹ ಯುವಕರು ತಪ್ಪದೇ ಅವಕಾಶ ಕಳೆದುಕೊಳ್ಳದೆ ಸೇನೆ ಸೇರಿ ದೇಶ ಸೇವೆ ಮಾಡಬೇಕು ಎಂದು ಸಲಹೆ ನೀಡಿದರು. ಕಾರ್ಗಿಲ್ ಯುದ್ಧ ಗೆಲ್ಲಬೇಕಾದರೆ ದೇಶದ ಸೈನಿಕರು ಅನೇಕ ರೀತಿಯ ನೋವುಗಳನ್ನು ಅನುಭವಿಸಿದ್ದಾರೆ. ಅನೇಕ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅದೇಷ್ಟೊ ಸೈನಿಕರು ಗಾಯಗೊಂಡು ಕೈ ಕಾಲು ಕಳೆದುಕೊಂಡಿದ್ದಾರೆ. ಆದರೂ ಕೂಡ ಇಂದಿಗೂ ಅವರು ದೇಶ ಸೇವೆ ಮಾಡಿರುವ ಬಗ್ಗೆ ಗೌರವ ವ್ಯಕ್ತಪಡಿಸುತ್ತಾರೆ. ಗಡಿಯಲ್ಲಿ ಕೆಲಸ ಮಾಡುವುದು ಎಂದರೆ ಅದು ನಮ್ಮ ಭಾಗ್ಯ ಎಂದು ತಿಳಿಯಬೇಕು ಎಂದು ಹೇಳಿದರು. ಸಿದ್ದು ಬಿರಾದಾರ, ಮಹಾದೇವ ದೇಶಮುಖ, ಸಂಜು ನೇಳಗೆ, ದೀಪಕ ಬೀರಾದಾರ, ಕರುಣಾಕರ, ಮಂಜುಸ್ವಾಮಿ, ಸಂತೋಷ ಹಾಗೂ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next