Advertisement

ಅಂಬಿ ಹುಟ್ಟುಹಬ್ಬಕ್ಕೆ ಭಟ್ಟರ ವಿಶೇಷ ಸಾಂಗ್: Watch

04:21 PM May 29, 2018 | Team Udayavani |

ಕನ್ನಡದ ಚಿತ್ರರಂಗದ ವಿಕಟಕವಿ ಹಾಗೂ ಬೇಡಿಕೆಯ ಗೀತರಚನೆಕಾರರಾಗಿರುವ ನಿರ್ದೇಶಕ ಯೋಗರಾಜ್ ಭಟ್ ಈಗಾಗಲೇ ಹಲವಾರು ಹಿಟ್ ಹಾಡುಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದಾರೆ.

Advertisement

ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನದ ಜಾಗೃತಿಯನ್ನು ಮೂಡಿಸುವ ಸಲುವಾಗಿ ಹಾಡನ್ನು ರಚಿಸಿದ್ದರಲ್ಲದೇ, ಅವರ ನಿರ್ದೇಶನದ ಪಂಚತಂತ್ರ ಚಿತ್ರದಲ್ಲೂ ಮತದಾನ ವಿಷಯಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಹಾಡನ್ನು ಬರೆದು ಜನರಿಗೆ ಮತದಾನದ ಅರಿವನ್ನು ಮೂಡಿಸಿದ್ದರು. 

ಇದೀಗ ಕನ್ನಡ ಚಿತ್ರರಂಗದಲ್ಲಿ ಅಂಬರೀಷ್ ಅವರ ಸಾಧನೆ ಹಾಗೂ ಅವರ ಮೇಲೆ ಜನರಿಗಿರುವ ಪ್ರೀತಿ-ವಿಶ್ವಾಸಗಳ ಕುರಿತು ಒಂದು ಹಾಡನ್ನು ರಚಿಸಿಕೊಟ್ಟಿದ್ದಾರೆ. ಅಲ್ಲದೇ ಭಟ್ಟರು ಈ ಹಾಡನ್ನು ಅವರ 66ನೇ ಹುಟ್ಟುಹಬ್ಬದ ಪ್ರಯುಕ್ತ ರಚಿಸಿದ್ದಾರೆ. ಅಲ್ಲದೇ ಈ ಹಿಂದೆ ಅಂಬರೀಷ್ ಅವರ 60ನೇ ಹುಟ್ಟುಹಬ್ಬಕ್ಕೂ ವಿಶೇಷವಾದ ಹಾಡನ್ನು ಭಟ್ಟರು ರಚಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next