Advertisement

ಭಟ್ಕಳ: ಲಾಡ್ಜ್ ಒಂದರಲ್ಲಿ ಯುವಕನ ಬರ್ಬರ ಹತ್ಯೆ

09:53 AM Oct 22, 2019 | Team Udayavani |

ಭಟ್ಕಳ: ಲಾಡ್ಜ್ ಒಂದರಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.

Advertisement

ಮುಗಳಿಹೊಂಡದ ನಿವಾಸಿ ಆಫಾನ್ ಜಬಾಲಿ (25)  ಹತ್ಯೆಯಾದ ಯುವಕ. ಕೊಲೆಗೆ ಹಣಕಾಸು ವ್ಯವಹಾರವೇ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ. ದೊಡ್ಡ ಡೀಲ್ ಕುದುರಿಸಲು ಆಫಾನ ಸೇರಿದಂತೆ  5-6 ಜನರು ಶಾನಭಾಗ್ ವಸತಿಗೃಹದ ಕೋಣೆಯನ್ನು ಸೇರಿಕೊಂಡಿದ್ದು, ಮಾತುಕತೆ ವಿಫಲವಾಗಿ ಕೊಲೆ ಘಟನೆಯವರೆಗೂ ಬಂದು ನಿಂತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆಫಾನ್ ನನ್ನು  ಹತ್ಯೆಗೈದು  ಹೋಟೆಲಿನಿಂದ ಪರಾರಿಯಾಗುವ ಯತ್ನದಲ್ಲಿರುವಾಗಲೇ ಓರ್ವನನ್ನು  ಪೊಲೀಸ್ ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನುಳಿದವರು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.  ಪೊಲೀಸ್ ವಶದಲ್ಲಿ ಇರುವ ಆರೋಪಿ ಮೃತ ಆಫಾನ್ ಊರಾದ ಮುಗಳಿಹೊಂಡದವನು ಎನ್ನುವ ಮಾಹಿತಿ ಲಭ್ಯವಾಗಿದೆ.  ಕೊಲೆಯಾಗುವ ಮುನ್ನ  ಆಫಾನ್  ಜಬಾಲಿ ತನ್ನ ಸಹೋದರಿನಗೆ ಕರೆ ಮಾಡಿದ್ದು , ತನ್ನನ್ನು ಕೋಣೆಯಲ್ಲಿ ಬಂಧಿಸಿರುವ ವಿಷಯ ಹೇಳಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next