Advertisement

Bhatkal: ವಿವಾಹಿತೆಯ ಶವ ತೋಟದ ಬಾವಿಯಲ್ಲಿ ಪತ್ತೆ

07:46 PM Oct 09, 2023 | Team Udayavani |

ಭಟ್ಕಳ: ವಿವಾಹಿತಯೋರ್ವಳು ತೋಟದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಸಾವಿನಲ್ಲಿ ಶಂಸಯ ವ್ಯಕ್ತಪಡಿಸಿ ಆಕೆಯ ಸಹೋದರ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಮೃತ ಮಹಿಳೆಯನ್ನು ಕಟಗಾರಕೊಪ್ಪದ ಅತ್ತಿಬಾರ ನಿವಾಸಿ ಲಕ್ಷ್ಮೀ (32) ಎಂದು ಗುರುತಿಸಲಾಗಿದೆ. ಶಿರಾಲಿ ಹುಲ್ಲುಕ್ಕಿಯವಳಾದ ಲಕ್ಷ್ಮೀಯನ್ನು ಕಳೆದ ಒಂದೂವರೆ ವರ್ಷಗಳ ಹಿಂದೆ ಅತ್ತೀಬಾರ ವೆಂಕಟೇಶ ಗೊಂಡ ಅವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಅ. 8ರಂದು ಸಂಜೆ 7ಗಂಟೆಯಿಂದ 7.30 ರ ನಡುವೆ ತನ್ನ ಸಹೋದರಿ ತೋಟದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಆಕೆಯ ಸಾವಿನ ಬಗ್ಗೆ ಸಂಶಯವಿದೆ. ಸೂಕ್ತ ತನಿಖೆ ಮಾಡಬೇಕು ಎಂದು ಆಕೆಯ ಸಹೋದರ ಜನ್ನ ತಿಮ್ಮಪ್ಪ ಗೊಂಡ ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಮುರ್ಡೇಶ್ವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next