Advertisement

ಭಾಸ್ಕರ ಶೆಟ್ಟಿ ಕೊಲೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

06:15 AM Aug 22, 2017 | |

ಉಡುಪಿ: ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ (51), ನವನೀತ್‌ ಶೆಟ್ಟಿ (21), ನಂದಳಿಕೆ ನಿರಂಜನ ಭಟ್‌ (26), ಸಾಕ್ಷ್ಯನಾಶದ ಆರೋಪಿಗಳಾದ ನಿರಂಜನನ ತಂದೆ ಶ್ರೀನಿವಾಸ ಭಟ್‌ (57) ಮತ್ತು ಕಾರು ಚಾಲಕ ರಾಘು (26) ಸೋಮವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

Advertisement

ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗದ ಕಾರಣ ಪ್ರಕರಣದ ಚಾರ್ಜ್‌ ನಡೆಯಲಿಲ್ಲ. ಹಾಗಾಗಿ ಮುಂದಿನ ವಿಚಾರಣಾ ಪ್ರಕ್ರಿಯೆಯ ದಿನಾಂಕವನ್ನು ಅ. 23ಕ್ಕೆ ನ್ಯಾಯಾಧೀಶರು ನಿಗದಿಪಡಿಸಿದರು.

ಖಾಸಗಿ ಕಾರಿನಲ್ಲಿ ಪಯಣ
ರಾಜೇಶ್ವರಿ, ನಿರಂಜನ ಮತ್ತು ನವನೀತ್‌ ಅವರನ್ನು ಮಂಗಳೂರು ಜೈಲಿನಿಂದ ಕರೆದುಕೊಂಡು ಬರಲಾಗಿತ್ತು. ಪೊಲೀಸ್‌ ಎಸ್ಕಾರ್ಟ್‌ ವಾಹನದ ಬದಲಾಗಿ ಖಾಸಗಿ ಹವಾನಿಯಂತ್ರಿತ ಕಾರಿನಲ್ಲಿ ಆರೋಪಿಗಳನ್ನು ಕೋರ್ಟ್‌ಗೆ ಕರೆದುಕೊಂಡು ಬರಲಾಗಿತ್ತು. ಇದು ಚರ್ಚೆಗೆ ಗ್ರಾಸವಾಯ್ತು.ಎಸ್ಕಾರ್ಟ್‌ ಲಭ್ಯವಿಲ್ಲದ ಸಂದರ್ಭ ಖಾಸಗಿ ವಾಹನದಲ್ಲಿ ಕರೆದೊಯ್ಯಲು ಕಾನೂನಿನಲ್ಲಿ ಅಡ್ಡಿ ಇಲ್ಲ ಎಂದು ನ್ಯಾಯವಾದಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಹಣವಂತರಾದರೆ ಅವರಿಗೆ ಎಸಿ ಕಾರಿನ ರಾಜ ಮರ್ಯಾದೆಯನ್ನು ಪೊಲೀಸರು ಕೊಡುವುದು ವಾಡಿಕೆಯಾಗಿಬಿಟ್ಟಿದೆ ಎಂದು ಸಾಮಾನ್ಯ ಜನರು ಕೋರ್ಟ್‌ ಆವರಣದಲ್ಲಿ ಮಾತನಾಡಿಕೊಳ್ಳುತ್ತಿದ್ದರು.

ಮೂವರ ಅಮಾನತು: ಆರೋಪಿಗಳನ್ನು ಖಾಸಗಿ ಕಾರಿನಲ್ಲಿ ಕ‌ರೆದು ಕೊಂಡು ಬಂದ ಹಿನ್ನೆಲೆಯಲ್ಲಿ ಮೂವರು ಸಿಬಂದಿಯನ್ನು ಅಮಾನತು ಗೊಳಿಸಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದರು. ಸುಧಾಕರ್‌, ರೇಣುಕಾ ಹಾಗೂ ಸಲ್ಮಾನ್‌ ಖಾನ್‌ ಅಮಾನತುಗೊಂಡವರು.

Advertisement

Udayavani is now on Telegram. Click here to join our channel and stay updated with the latest news.

Next