Advertisement

ನಗರ ಪೊಲೀಸ್‌ ಆಯುಕ್ತರಾಗಿ ಭಾಸ್ಕರ್‌ ರಾವ್‌ ನೇಮಕ

10:00 AM Aug 03, 2019 | Sriram |

ಬೆಂಗಳೂರು: ನಗರ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಸಹಿತ ಏಳು ಮಂದಿ ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.

Advertisement

ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ಭಾಸ್ಕರ್‌ ರಾವ್‌ ಅವರನ್ನು ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ. ನಿರ್ಗಮಿತ ಆಯುಕ್ತ ಅಲೋಕ್‌ ಕುಮಾರ್‌ ಅವರನ್ನು ಕೆಎಸ್‌ಆರ್‌ಪಿ ಎಡಿಜಿಪಿ ಹುದ್ದೆಗೆ ವರ್ಗಾಯಿಸಲಾಗಿದೆ.

ಹೇಮಂತ್‌ ನಿಂಬಾಳ್ಕರ್‌ ಹೆಚ್ಚುವರಿ ಪೊಲೀಸ್‌ ಆಯುಕ್ತ ಬೆಂಗಳೂರು ಆಡಳಿತ ವಿಭಾಗ, ಉಮೇಶ್‌ ಕುಮಾರ್‌, ಐಜಿಪಿ ಅಗ್ನಿಶಾಮಕ ಸೇವೆ, ಡಾ| ಬಿ.ಆರ್‌ ರವಿಕಾಂತೇಗೌಡ, ಜಂಟಿ ಪೊಲೀಸ್‌ ಆಯುಕ್ತ ಬೆಂಗಳೂರು ಪಶ್ಚಿಮ ವಿಭಾಗ, ಆರ್‌. ಚೇತನ್‌, ಎಸ್ಪಿ, ಕರಾವಳಿ ಕಾವಲು ಪಡೆ ಉಡುಪಿ, ಡಿ. ದೇವರಾಜ, ಎಸ್ಪಿ, ಸಿಐಡಿ ಬೆಂಗಳೂರು, ಡಾ| ಎಂ. ಅಶ್ವಿ‌ನಿ, ಡಿಸಿಪಿ ಗುಪ್ತಚರ ವಿಭಾಗ ಬೆಂಗಳೂರು ಇಲ್ಲಿಗೆ ವರ್ಗಾಯಿಸಿ ಆದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next