ಅಂಬರೀಶ್ ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ಗೆ ಸಾಂತ್ವನ ಹೇಳಲು ಸಾಕಷ್ಟು ಜನರು ಆಗಮಿಸುತ್ತಿದ್ದ ದೃಶ್ಯ
ಮಂಗಳವಾರ ಕಂಡು ಬಂದಿತು.
Advertisement
ಮತ್ತೂಂದೆಡೆ, ಕಳೆದ ಮೂರು ದಿನಗಳಿಂದ ಮಾನಸಿಕ ಹಾಗೂ ದೈಹಿಕವಾಗಿ ಬಳಲಿರುವ ಅಂಬಿ ಪತ್ನಿ ಮತ್ತು ಪುತ್ರನಿಗೆ ಭಾರತಿ ವಿಷ್ಣುವರ್ಧನ್ ತಮ್ಮ ಮನೆಯಲ್ಲಿ ಊಟ ತಯಾರು ಮಾಡಿ ಕಳುಹಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ತಾವು ಬರಲಾಗದೇ ಭಾರತಿ ವಿಷ್ಣುವರ್ಧನ್, ತಮ್ಮ ಕಾರು ಚಾಲಕನ ಕೈಯಲ್ಲಿ ಊಟ ಕಳುಹಿಸಿದ್ದಾರೆನ್ನಲಾಗಿದೆ. ಇನ್ನು, ಅಭಿಷೇಕ್ ಹಾಗೂ ಸುಮಲತಾ ಅವರಿಗೆ ಸಾಂತ್ವನ ಹೇಳಲು ಅನೇಕ ಮಂದಿ ಜೆ.ಪಿ.ನಗರದ ನಿವಾಸಕ್ಕೆ ಧಾವಿಸುತ್ತಿದ್ದಾರೆ. ಮಂಗಳವಾರ “ಅಮರ್’ ಚಿತ್ರದ ನಿರ್ದೇಶಕ ನಾಗಶೇಖರ್ ಸೇರಿ ಅನೇಕರು ಅಂಬರೀಶ್ ಅವರ ಮನೆಗೆ ಭೇಟಿ ನೀಡಿ, ಅಭಿಷೇಕ್ ಹಾಗೂ ಸುಮಲತಾ ಅವರಿಗೆ ಸಾಂತ್ವನ ಹೇಳಿದರು.