Advertisement

ಭಾರತ್‌ ಜೋಡೋ ಯಾತ್ರೆ: ಕುಟ್ಟನಾಡು ರೈತರ ಜತೆಗೆ ರಾಹುಲ್‌ ಸಂವಾದ

08:51 PM Sep 18, 2022 | Team Udayavani |

ಆಲಪ್ಪುಳ: ಭಾರತ್‌ ಜೋಡೋ ಯಾತ್ರೆ ಕೈಗೊಂಡಿರುವ ವಯನಾಡ್‌ ಸಂಸದ ಭಾನುವಾರ ಕುಟ್ಟನಾಡಿನ ಭತ್ತದ ಬೆಳೆಗಾರರ ಜತೆಗೆ ಸಂವಾದ ನಡೆಸಿದರು. ಇದಕ್ಕಿಂತ ಮೊದಲು ಅವರು ಆಲಪ್ಪುಳ ಜಿಲ್ಲೆಯ  ಒಟ್ಟಪ್ಪಾನದಿಂದ ಆರಂಭವಾಗಿದ್ದು, ವಂದನಂನಲ್ಲಿ ಅಂತ್ಯವಾಗಿದೆ. ಅಲ್ಲಿಂದ 3.4 ಕಿ.ಮೀ. ದೂರದಲ್ಲಿರುವ ಕಾರ್ಮೆಲ್‌ ಕಾಲೇಜ್‌ ಆಫ್ ಇಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಬಳಿ ರಾಹುಲ್‌ ಗಾಂಧಿ ಸೇರಿ ಕಾಂಗ್ರೆಸ್‌ನ ಹಲವು ನಾಯಕರು ತಂಗಿದ್ದಾರೆ.

Advertisement

ಕರುವಟ್ಟ ಬಳಿ ಮಧ್ಯಾಹ್ನದ ವಿಶ್ರಾಂತಿ ಪಡೆದ ರಾಹುಲ್‌ ಅಲ್ಲಿನ ರೈತರು ಮತ್ತು ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಾಲಕಿಯೊಬ್ಬಳು ತಾನು ಬರೆದ ರಾಹುಲ್‌ ಗಾಂಧಿ ಚಿತ್ರವನ್ನು ಅವರಿಗೆ ಹಸ್ತಾಂತರಿಸಿದ್ದಾಳೆ.

ಯಾತ್ರೆಯ ವೇಳೆ ತಮ್ಮನ್ನು ಭೇಟಿಯಾಗಲೆಂದು ಬಂದ ಜನರೊಂದಿಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ರಾಹುಲ್‌, “ಇದು ಕೇವಲ ಚಿತ್ರಗಳಲ್ಲ. ಇದು ದೇಶದ ಪ್ರತಿಯೊಬ್ಬ ನಾಗರಿಕನ ಭಾವನೆ, ಅವರ ವಿಶ್ವಾಸ, ಏಕತೆ, ಶಕ್ತಿ ಮತ್ತು ಪ್ರೀತಿ’ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next