Advertisement

ಭಾರತ್‌ ಬ್ಯಾಂಕ್‌ ವಿಲೇಪಾರ್ಲೆ: 22ನೇ ಸ್ಥಾಪನಾ ದಿನಾಚರಣೆ

02:23 PM Mar 17, 2018 | |

ಮುಂಬಯಿ: ಬಿಲ್ಲವರ ಅಸೋಸಿ ಯೇಶನ್‌ ಮುಂಬಯಿ ಇದರ ಸಂಚಾಲಕತ್ವದ ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ನ ವಿಲೇಪಾರ್ಲೆ ಪೂರ್ವ ಶಾಖೆಯ 22 ನೇ ಸ್ಥಾಪನಾ ದಿನಾಚರಣೆಯು ಮಾ. 14 ರಂದು ವಿವಿಧ ಧಾರ್ಮಿಕ ಕರ್ಯಾಕ್ರಮ ನಡೆಯಿತು.

Advertisement

ಶಾಖೆಯಲ್ಲಿ ನಾರಾಯಣ ಗುರುಗಳಿಗೆ ವಿಶೇಷ ಪೂಜೆಸಲ್ಲಿಸಿ, ಕೇಕ್‌ ಕತ್ತರಿಸಿ ಶಾಖೆಯ ಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಬ್ಯಾಂಕಿನ ಪಶ್ಚಿಮ ವಲಯದ ಮುಖ್ಯಸ್ಥ, ಉಪ ಮಹಾಪ್ರಬಂಧಕ ಸುರೇಶ್‌ ಎಸ್‌. ಸಾಲ್ಯಾನ್‌ ಈ ಸಂದರ್ಭದಲ್ಲಿ ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.

ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ನ ವಿಲೇಪಾರ್ಲೆ ಪೂರ್ವ ಶಾಖೆಯ ಮುಖ್ಯಸ್ಥ, ಕವಿ, ಲೇಖಕ ಹರೀಶ್‌ ಕೆ. ಹೆಜ್ಮಾಡಿ, ಶಾಖೆಯ ಉಪ ಪ್ರಬಂಧಕ ಅಶೋಕ್‌ ಶೆಟ್ಟಿ, ಶುಭಾ ಪೂಜಾರಿ, ಇತರ ಅಧಿಕಾರಿಗಳಾದ ಸೀಮಾ ವಿಶ್ವನಾಥ ಪೂಜಾರಿ, ಮಲ್ಲಿಕಾ ಪಿ. ಪೂಜಾರಿ, ಸ್ಮಿತಾ ಅನಿಲ್‌ ಅಂಚನ್‌, ಮೇಘನಾ ನವೀನ್‌ ಕೋಟ್ಯಾನ್‌ ಹಾಗೂ ಇತರ ಸಿಬಂದಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next