Advertisement

ಭಾರತ್‌ ಬ್ಯಾಂಕ್‌ ದಾದರ್‌ ಪಶ್ಚಿಮ ಶಾಖೆಗೆ ಬಿಮಾ ಬ್ಯಾಂಕ್‌ ಪುರಸ್ಕಾರ

04:43 PM Jul 14, 2017 | Team Udayavani |

ಮುಂಬಯಿ:  ಭಾರತ್‌ ಕೋಆಪರೇಟಿವ್‌ ಬ್ಯಾಂಕ್‌ ಮುಂಬಯಿ ಇದರ ದಾದರ್‌ ಪಶ್ಚಿಮದ ಪೋಚ್‌ಗೀಸ್‌ ಚರ್ಚ್‌ ಸಮೀಪದ ಭಾರತ್‌ ಬ್ಯಾಂಕ್‌ ಶಾಖೆಗೆ ಲೈಫ್‌ ಇನ್‌ಶ್ಯೂರೆನ್ಸ್‌ ಕಂಪೆನಿಯಿಂದ ಬಿಮಾ ಬ್ಯಾಂಕ್‌ ಅವಾರ್ಡ್‌ ಲಭಿಸಿದೆ.

Advertisement

ಜು. 7ರಂದು ದಾದರ್‌ ಪಶ್ಚಿಮದ ಶಾಖೆಯಲ್ಲಿ ಪುರಸ್ಕಾರ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಜೀವವಿಮಾ ನಿಗಮದ ಪದಾಧಿಕಾರಿಗಳು ಪುರಸ್ಕಾರವನ್ನು ಪ್ರದಾನಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೇಂದ್ರ ಕಚೇರಿಯ ಜನರಲ್‌ ಮ್ಯಾನೇಜರ್‌ ವಿದ್ಯಾನಂದ್‌ ಎಸ್‌. ಕರ್ಕೇರ, ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ ಸುರೇಶ್‌ ಎಸ್‌. ಸಾಲ್ಯಾನ್‌, ಲೈಫ್‌ ಇನ್‌ಶ್ಯೂರೆನ್ಸ್‌ ಸಲಹೆಗಾರ ಎಚ್‌. ಎಸ್‌. ಪೂಜಾರಿ, ಬ್ಯಾಂಕ್‌ ಮ್ಯಾನೇಜರ್‌ ಕಿರಣ್‌ ಬಂಟ್ವಾಳ್‌, ಅಸಿಸ್ಟೆಂಟ್‌ ಮ್ಯಾನೇಜರ್‌ ನಾರಾಯಣ ಎ. ಸನಿಲ್‌ ಉಪಸ್ಥಿತರಿದ್ದರು.

ಪದಾಧಿಕಾರಿಗಳಾದ ರಾಜೇಶ್‌ ಬಿ. ಬಂಗೇರ, ಸವಿತಾ ಕೆ. ಪೂಜಾರಿ, ಸಪ್ನಾ ಎಲ್‌. ಬಂಗೇರ, ರಶ್ಮಿ ಪಿ. ಪೂಜಾರಿ, ನಿಶಿತ್‌ ಆರ್‌. ಕೋಟ್ಯಾನ್‌, ಲೀಲಾಧರ ಎ. ಸುವರ್ಣ, ಅಶ್ವಿ‌ನಿ ಕೋಟ್ಯಾನ್‌, ಪ್ರಿಯಾ ಮರಾಠೆ, ರಮೇಶ್‌ ಸುವರ್ಣ, ಕೃಷ್ಣ ಎಲ್‌. ಪೂಜಾರಿ, ರೋಶನ್‌ ಕಜ್ರೆ, ಸಂದೀಪ್‌ ಕಾಂಬ್ಳೆ, ಸುರೇಶ್‌ ಫೆಡೆ°àಕರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next