Advertisement

ಬಂಡೀಪುರ: ಹೆಣ್ಣಾನೆ ಸಾವು

03:21 PM Jan 18, 2018 | Team Udayavani |

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಬರುವ ಕುಂದಕೆರೆ ಅರಣ್ಯದಲ್ಲಿ 35 ವರ್ಷದ ಹೆಣ್ಣಾನೆ ಸಾವಿಗೀಡಾಗಿದೆ.

Advertisement

ಕುಂದಕೆರೆ ಅರಣ್ಯ ವಲಯದ ಅರೆಕಲ್ಲುಹಳ್ಳದ ಬಳಿಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗೆ ಸ್ವಾಭಾವಿಕವಾಗಿ ಸಾವನಪ್ಪಿರುವ ಹೆಣ್ಣಾನೆಯ ಕಳೇಬರವೊಂದು ಕಂಡಿದೆ. ತಕ್ಷಣ ಈ ಮಾಹಿತಿಯನ್ನು ಕೂಡಲೇ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಪಶುವೈದ್ಯ ಡಾ.ನಾಗರಾಜು, ವಲಯ ಅರಣ್ಯಾಧಿಕಾರಿ ಪ್ರಭುಸ್ವಾಮಿ ಹಾಗೂ ಸಿಬ್ಬಂದಿ ತೆರಳಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಹುಲಿ ಯೋಜನೆಯ ನಿರ್ದೇಶಕ ಅಂಬಾಡಿ ಮಾಧವ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next