Advertisement
ಚಳಕಾಪೂರ ಗ್ರಾಮದ ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢ ಮಠದಲ್ಲಿ ನಡೆದ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ 183ನೇ ಜಯಂತಿ ಮಹೋತ್ಸವದ 6ನೇ ದಿನದ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಎಲ್ಲರೂ ಮಾನವಂತರಾಗಿ ಬದಕಬೇಕು ಎನ್ನುವ ಆಶಯ ಹೊಂದಿರುತ್ತಾರೆ. ಆದರೆ ಕೆಲವರು ಮಾನಕ್ಕಿಂತ ಮುಖ್ಯ ಧನಕ್ಕೆ ಆದ್ಯತೆ ಕೊಡುತ್ತಾರೆ.
ವೈಶಾಲತೆ ಹೊಂದಿದ್ದರೆ ನಮಗೆ ಗೌರವ ಸಿಗುತ್ತದೆ ಎಂದು ಹೇಳಿದರು.
Related Articles
Advertisement
ಇದೇ ವೇಳೇ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಮೂರ್ತಿ ತುಲಾಭಾರ, ಸದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಗಳ ತುಲಾಭಾರ ಸೇವೆ ಹಾಗೂ ವೈಭವ ಆರತಿ ಪೂಜೆ ನಡೆಯಿತು. ಬೆಳಗ್ಗೆ ಸಾವಿರಾರು ಭಕ್ತಾದಿಗಳಿಂದ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಸಾಮೂಹಿಕ ಗ್ರಂಥ ಪಾರಾಯಣ ನಡೆಯಿತು. ಮತ್ತು ವಿವಿಧ ಸಂಗೀತ ಕಲಾವಿದರಿಂದ ಸಂಗೀತ ಸೇವೆ ನಡೆಯಿತು. ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಜು ಐಹೊಳೆ, ಜೈಶ್ರೀ ಶಿವರಾಜ ಭೀಮಶೆಟ್ಟಿ, ಕಸಾಪ ಮಾಜಿ ಅಧ್ಯಕ್ಷ ವಸಂತ ಹುಣಸನಾಳೆ, ವಿಜಯಕುಮಾರ ಗೌಡಗಾವೆ, ವೈಜಿನಾಥಪ್ಪ ದಾಬಶೆಟ್ಟೆ, ಡಾ| ಬಸವರಾಜ ಎಲ್ಲಡಗಿ, ನಾಗಯ್ನಾ ಸ್ವಾಮಿ, ಮಠ್ ಸೋಮಯ್ನಾ, ಚಿದಂಬರ ಶಿಕ್ಷಣ ಸಂಸ್ಥೆಯ ನಿರ್ದೇಶ ಶಿವಶರಣಪ್ಪಾ ಸಾವಳಗಿ, ರಮೇಶ ಮಠಪತಿ ಉಪಸ್ಥಿತರಿದ್ದರು. ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢ ಮಠ ಚಳಕಾಪೂರದ ಶ್ರೀ ಶಂಕರಾನಂದ ಮಹಾಸ್ವಾಮಿಗಳು ಸ್ವಾಗತಿಸಿದರು. ಶ್ರೀ ಗಣೇಶಾನಂದ ಮಹಾರಾಜರು ನಿರೂಪಿಸಿದರು. ಹುಮನಾಪಾದಿನ ಪ್ರಾಂಶುಪಾಲ ಶಿವಾನಂದ ಮಠಪತಿ ವಂದಿಸಿದರು.