Advertisement

Bhalki;ಮಳೆಯ ರಭಸ: ಕಾರಂಜಾ ನದಿಯಲ್ಲಿ ಇಬ್ಬರು ನೀರುಪಾಲು

11:16 PM Jun 12, 2023 | Team Udayavani |

ಭಾಲ್ಕಿ: ರವಿವಾರ ಸುರಿದ ಭಾರಿ ಮಳೆಯಿಂದ ಕಾರಂಜಾ ನದಿಯಲ್ಲಿ ಇಬ್ಬರು ಪುರಷರು ಮೃತ ಪಟ್ಟ ಘಟನೆ ಕುಂಟೆಸಿರಸಿ-ಮರೂರ ಗ್ರಾಮಗಳ ಮಧ್ಯದಲ್ಲಿ ಸೋಮವಾರ ನಡೆದಿದೆ.

Advertisement

ತಾಲೂಕಿನ ಜೋಳದಪಕಾ ಗ್ರಾಮಕ್ಕೆ ಅಂತ್ಯ ಸಂಸ್ಕಾರಕ್ಕಾಗಿ ತೆರಳಿದ ಹುಮನಾಬಾದ ತಾಲೂಕಿನ ಜಲಸಿಂಗಿ ಗ್ರಾಮದ ಭೋವಿ ಸಮಾಜದ ತುಕಾರಾಮ ಲಕ್ಷ್ಮಣ ವಾಡೆಕರ್ (33) ಮತ್ತು ಘಾಟಬೋರಾಳ ಗರಾಮದ ತಿಪ್ಪಣ್ಣಾ ವಿಶ್ವನಾಥ ದೊತರೆ (40) ಮೃತ ವ್ಯಕ್ತಿಗಳು.

ಮೃತ ತುಕಾರಾಮ ವಾಡೆಕರ್ ಮತ್ತು ತಿಪ್ಪಣ್ಣಾ ದೊತರೆಯವರು ಜೋದಪಕಾ ಗ್ರಾಮದಲ್ಲಿ ರವಿವಾರ,ಸಂಬಂಧಿಗಳ ಅಂತ್ಯ ಸಂಸ್ಕಾರ ನೆರವೇರಿಸಿ ಹಿಂದಿರುಗಿ ತಮ್ಮ ಸ್ವಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ,ಸತತವಾಗಿ ಸುರಿದ ಮಳೆಯಿಂದ ಕಾರಂಜಾ ನದಿಗೆ ರಭಸದಿಂದ ಹರಿದು ಬಂದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕುಂಟೆಸಿರಸಿ-ಮರೂರ ಮಧ್ಯದಲ್ಲಿ ನದಿಗೆ ಅಡ್ಡಲಾಗಿ ಕಟ್ಟಿರುವ ಸಣ್ಣ ಸೇತುವೆ
ಮೂಲಕ ದ್ವಿಚಕ್ರ ವಾಹನದಲ್ಲಿ ನದಿ ದಾಟುವಾಗ ಈ ಘಟನೆಸಂಭವಿಸಿದೆ.

ಸೋಮವಾರ ಬೆಳಿಗ್ಗೆಯಿಂದ ಪೊಲೀಸ ಸಿಬಂದಿ ಮತ್ತು ಅಗ್ನಿಶಾಮಕ ದಳದ ಸಿಬಂದಿಗಳು ನದಿಯಲ್ಲಿ ಹುಡುಕಿ ಮೃತದೇಹ ಮತ್ತು ದ್ವಿಚಕ್ರ ವಾಹನ ಹೊರಗೆ ತೆಗೆದಿದ್ದಾರೆ. ಉಪ ತಹಶೀಲ್ದಾರ ಗೋಪಾಲ ಹಿಪ್ಪರಗಿ ಯವರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next