Advertisement

ಭಾಕರ್‌, ಸಿಧು ಪರೀಕ್ಷಾ ವೇಳಾಪಟ್ಟಿ ಬದಲಿಸಲು ಮನವಿ

12:30 AM Feb 16, 2019 | |

ಹೊಸದಿಲ್ಲಿ: ಭಾರತದ ಇಬ್ಬರು ಪ್ರತಿಭಾವಂತ ಯುವ ಶೂಟರ್‌ಗಳಾದ ವಿಜಯವೀರ್‌ ಸಿಧು, ಮನು ಭಾಕರ್‌ ಅವರ ಪರೀಕ್ಷಾ ವೇಳಾಪಟ್ಟಿ ಬದಲಿಸಲು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಸಿಬಿಎಸ್‌ಇಗೆ ಮನವಿ ಮಾಡಿದೆ. ಇಬ್ಬರೂ 12ನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಾ. 25ರಿಂದ ಎ. 2ರ ವರೆಗೆ ಚೀನಾ ತೈಪೆಯಲ್ಲಿ ನಡೆಯುವ ಏಶ್ಯನ್‌ ಏರ್‌ ಗನ್‌ ಚಾಂಪಿಯನ್‌ಶಿಪ್‌ನಲ್ಲಿ ಇಬ್ಬರೂ ಭಾಗವಹಿಸಬೇಕಾಗಿದೆ. ಇದೇ ವೇಳೆ ಇಬ್ಬರೂ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಪರೀಕ್ಷೆಗಳನ್ನೂ ಬರೆಯಬೇಕಿದೆ. ಹೀಗಾಗಿ ಈ ಪರೀಕ್ಷೆಗಳಿಗಷ್ಟೇ ಹೊಸ ದಿನಾಂಕ ನಿಗದಿಪಡಿಸಲು “ಸಾಯ್‌’ ಕೇಳಿಕೊಂಡಿದೆ.  ಕೇಂದ್ರ ಸರಕಾರ ಕ್ರೀಡಾಪಟುಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವ ನಿರ್ಧಾರ ಹೊಂದಿರುವುದರಿಂದ ಸಾಯ್‌ ಈ ಮನವಿ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next