Advertisement

‘ಭೈರವ’ನಲ್ಲಿ ಹೊಸಬರ ಕನಸು

03:14 PM Jan 02, 2022 | Team Udayavani |

“ಭೈರವ’ – ಹೀಗೊಂದು ಚಿತ್ರ ಆರಂಭವಾಗುತ್ತಿದ್ದು, ಮೊದಲ ಹಂತವಾಗಿ ಚಿತ್ರದ ಟೈಟಲ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರವನ್ನು ರಾಮತೇಜ್‌ ನಿರ್ದೇಶಿಸುತ್ತಿದ್ದಾರೆ. ಭೈರವ ಚಿತ್ರವನ್ನು ಹನಿ ಚೌಧರಿ ಮತ್ತು ವೈಭವ್‌ ಬಜಾಜ್‌ ಅವರು ನಿರ್ಮಿಸುತ್ತಿದ್ದಾರೆ.

Advertisement

ಚಿತ್ರದ ಮುಖ್ಯ ಭೂಮಿಕೆಯಲ್ಲಿ “ಕಮರೊಟ್ಟು ಚೆಕ್‌ಪೋಸ್ಟ್…’ ಖ್ಯಾತಿಯ ಸನತ್‌ ನಾಯಕನಾಗಿ ಹಾಗೂ ಉಮೇಶ ಸಕ್ಕರೆನಾಡು ಸೇರಿದಂತೆ ಹಲವು ಕಲಾವಿದರ ದಂಡೇ ಚಿತ್ರದಲ್ಲಿದೆ.

ಈ ಚಿತ್ರಕ್ಕೆ ಚರಣ್‌ ಸುವರ್ಣ ಅವರ ಕಥೆ ಇದ್ದು, ರಾಮತೇಜ್‌ ಅವರು ಚಿತ್ರಕಥೆ ಹಾಗೂ ಸಂಭಾಷಣೆ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರೆ ಕಪಿಲ್‌ ದೀಕ್ಷಿತ್‌ ಅವರು ಕೂಡ ಹಿಂದಿ ಅವತರಣಿಕೆಗೆ ಮತ್ತು ಕ್ರಿಯಾಶೀಲವಾಗಿ ರಾಮತೇಜ್‌ ಅವರಿಗೆ ಜೊತೆಯಾಗಲಿದ್ದಾರೆ.

ಇದನ್ನೂ ಓದಿ:ಪುನೀತ್‌ ಸುತ್ತ ‘ಯಾರೋ ನೀನು’ ಹಾಡು

ಬಾಲಿವುಡ್‌ ಖ್ಯಾತ ಸಂಗೀತ ನಿರ್ದೇಶಕರಾದ ಅಮಿತ್‌ ದೀಕ್ಷಿತ್‌ ಅವರ ಸಂಗೀತ ನಿರ್ದೇಶನ ಹಾಗೂ ಕನ್ನಡದ ಖ್ಯಾತ ನೃತ್ಯ ನಿರ್ದೇಶಕರಾದ ಆ.ಧನಂಜಯ ನೃತ್ಯ ಸಂಯೋಜಿಸಿದರೆ ಟಿ.ನರಸಿಂಹ ಅವರ ಸಾಹಸ ನಿರ್ದೇಶನವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next